ಈ ಕವನ ಸಂಕಲನವು ಇಂಗ್ಲಿಷ್ ಅನುವಾದವಾಗಿದ್ದು, ಅವರ ರಾಜಕೀಯ ನಂಬಿಕೆಗಳು ಹಾಗೂ ಜನರ ಹಕ್ಕುಗಳ ಶ್ರೇಷ್ಠತೆಯ ಪ್ರತಿಪಾದನೆಯನ್ನು ಇವುಗಳಲ್ಲಿ ಕಾಣಬಹುದಾಗಿದೆ. ಕೃತಿಯಲ್ಲಿನ ಬಹುತೇಕ ಕವನಗಳನ್ನು ಬಂಧನವಾಗುವ ಮುನ್ನ ವರವರ ರಾವ್ ಅವರೇ ಆಯ್ಕೆ ಮಾಡಿದ್ದರು. ‘ವರವರ ರಾವ್ ಅವರು ಶಿಕ್ಷಕ, ಪತ್ರಕರ್ತ, ಅನುವಾದಕ, ಕ್ರಾಂತಿಕಾರಿ ಲೇಖಕರಾಗಿದ್ದಾರೆ. ತೆಲುಗಿನಲ್ಲಿ ಅವರು 13 ಕವನ ಸಂಕಲನಗಳನ್ನು ತಂದಿದ್ದಾರೆ’ ಎಂದು ಪೆಂಗ್ವಿನ್ ಪ್ರಕಾಶನವು ಪ್ರಕಟಣೆಯಲ್ಲಿ ತಿಳಿಸಿದೆ.