'ಜಾಗತಿಕ ಹಿಂಜರಿತದ ಸಂದರ್ಭದಲ್ಲಿ ರಾಷ್ಟ್ರದ ಆರ್ಥಿಕತೆಗೆ ಸಣ್ಣ ಉತ್ಪಾದಕರು ಮತ್ತು ಮಾರಾಟಗಾರರು ಕೊಡುಗೆ ನೀಡಿದ್ದರು. ಆದರೆ ಭ್ರಷ್ಟಾಚಾರ, ಬೆಲೆಯೇರಿಕೆ ಮತ್ತು ತಪ್ಪಾದ ಆರ್ಥಿಕ ನಿರ್ವಹಣೆಯಿಂದ ಹೆಚ್ಚಿನ ಸಂಖ್ಯೆಯ ಸಣ್ಣ ಮಾರಾಟಗಾರರನ್ನು ಬಲವಂತವಾಗಿ ವ್ಯಾಪಾರ ನಿಲ್ಲಿಸುವಂತೆ ಮಾಡಿದೆ. ಸಣ್ಣ ಮಾರಾಟಗಾರರಿಂದ ಕೊಳ್ಳುವ ಮೂಲಕ ಅವರನ್ನು ಬೆಂಬಲಿಸಬೇಕಿದೆ. ಅಮೆಜಾನ್ ಮತ್ತು ವಾಲ್ಮಾರ್ಟ್ ನಂತಹಮಾರಾಟಗಾರರ ಬದಲು ಸಣ್ಣ ವ್ಯಾಪಾರಿಗಳಿಂದ ಖರೀದಿಸಬೇಕು' ಎಂದು ವರುಣ್ ಗಾಂಧಿ ಟ್ವಿಟರ್ನಲ್ಲಿ ತಿಳಿಸಿದ್ದಾರೆ.