ಹಿಂದೂ ಭಕ್ತರು ಪ್ರಶಾಂತತೆ ಮತ್ತು ಪವಿತ್ರ ಭಾವನೆ ಹೊಂದಲು ದೇವಾಲಯಗಳಿಗೆ ಭೇಟಿ ನೀಡಿ ಕೊಡುಗೆಗಳನ್ನು ನೀಡುತ್ತಾರೆ. ಇದರಿಂದಾಗಿಯೇ ದೇವಸ್ಥಾನಗಳು ನಿರ್ವಹಿಸುವ ಶೈಕ್ಷಣಿಕ ಸಂಸ್ಥೆಗಳು, ಆರೋಗ್ಯ ಸೇವೆಗಳು, ಹಬ್ಬಗಳು, ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳು ಸೂಕ್ತ ರೀತಿಯಲ್ಲಿ ಜರುಗುತ್ತವೆ. ವಿಪರ್ಯಾಸವೆಂದರೆ ರಾಜ್ಯ ಸರ್ಕಾರಗಳು ದೇಶದ ಕೆಲವು ಶ್ರೀಮಂತ ದೇವಾಲಯಗಳ ಮತ್ತು ಭಕ್ತರ ಕಾಣಿಕೆಗಳನ್ನುತರ್ಕವಿಲ್ಲದೆ ಮತ್ತು ಅನಿಯಂತ್ರಿತವಾಗಿ ಖರ್ಚು ಮಾಡುತ್ತವೆ ಎಂದು ವಿಹಿಂಪದ ಅಂತರಾಷ್ಟ್ರೀಯ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.