ನವದೆಹಲಿ: ಹಿಂದೂ ದೇವಸ್ಥಾನಗಳು ಮತ್ತು ಧಾರ್ಮಿಕ ಸಂಸ್ಥೆಗಳನ್ನು ಸರ್ಕಾರದ ನಿಯಂತ್ರಣದಿಂದ ಸ್ವತಂತ್ರಗೊಳಿಸುವ ಕಾನೂನು ಜಾರಿಗೆ ತರುವಂತೆ ವಿಶ್ವ ಹಿಂದೂ ಪರಿಷತ್ (ವಿಹಿಂಪ) ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ. ದೇಶದಲ್ಲಿ ಕಾನೂನುಬಾಹಿರ ಮತಾಂತರವನ್ನು ತಡೆಯುವ ಬಲವಾದ ಕಾನೂನನ್ನು ಜಾರಿಗೊಳಿಸುವಂತೆಯೂ ಅದು ಕೇಂದ್ರಕ್ಕೆ ಮನವಿ ಮಾಡಿದೆ.
ಹಿಂದೂ ಸಮಾಜದ ನಿರ್ವಹಣೆಯಲ್ಲಿರುವ ವಿವಿಧ ದೇವಸ್ಥಾನಗಳಲ್ಲಿ ಪರ್ಯಾಯ ನಿಯಂತ್ರಣ ಕ್ರಮಗಳನ್ನು ರೂಪಿಸಲು ಸಲಹೆಗಳನ್ನು ಪಡೆಯುವ ಸಂಬಂಧ ವಿಹಿಂಪ ಕೇಂದ್ರೀಯ ನಾಯಕರನ್ನು ಹೊಂದಿರುವ ಸಮಿತಿ ಹಿಂದೂ ಧರ್ಮದ ದಾರ್ಶನಿಕರು ಮತ್ತು ಸಂತರನ್ನು ಭೇಟಿಯಾಗಲಿದೆ. ಈ ಸಮಿತಿಯು ವಿಹಿಂಪನ ಕೇಂದ್ರ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್, ಸಂಘಟನಾ ಕಾರ್ಯದರ್ಶಿ (ದಕ್ಷಿಣ ಭಾರತ) ಪಿ.ಎಂ.ನಾಗರಾಜನ್ ಮತ್ತಿತರನ್ನು ಒಳಗೊಂಡಿದೆ.
ಹಿಂದೂ ಭಕ್ತರು ಪ್ರಶಾಂತತೆ ಮತ್ತು ಪವಿತ್ರ ಭಾವನೆ ಹೊಂದಲು ದೇವಾಲಯಗಳಿಗೆ ಭೇಟಿ ನೀಡಿ ಕೊಡುಗೆಗಳನ್ನು ನೀಡುತ್ತಾರೆ. ಇದರಿಂದಾಗಿಯೇ ದೇವಸ್ಥಾನಗಳು ನಿರ್ವಹಿಸುವ ಶೈಕ್ಷಣಿಕ ಸಂಸ್ಥೆಗಳು, ಆರೋಗ್ಯ ಸೇವೆಗಳು, ಹಬ್ಬಗಳು, ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳು ಸೂಕ್ತ ರೀತಿಯಲ್ಲಿ ಜರುಗುತ್ತವೆ. ವಿಪರ್ಯಾಸವೆಂದರೆ ರಾಜ್ಯ ಸರ್ಕಾರಗಳು ದೇಶದ ಕೆಲವು ಶ್ರೀಮಂತ ದೇವಾಲಯಗಳ ಮತ್ತು ಭಕ್ತರ ಕಾಣಿಕೆಗಳನ್ನುತರ್ಕವಿಲ್ಲದೆ ಮತ್ತು ಅನಿಯಂತ್ರಿತವಾಗಿ ಖರ್ಚು ಮಾಡುತ್ತವೆ ಎಂದು ವಿಹಿಂಪದ ಅಂತರಾಷ್ಟ್ರೀಯ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.