<p><strong>ಹೈದರಾಬಾದ್:</strong> ತೆಲಂಗಾಣ ವಿಧಾನಪರಿಷತ್ತಿನ ಎರಡು ಪದವೀಧರರ ಕ್ಷೇತ್ರಗಳಿಗೆ ಮತದಾನ ಪ್ರಕ್ರಿಯೆ ಭಾನುವಾರ ಆರಂಭವಾಗಿದೆ. ಮಾಜಿ ಪ್ರಧಾನಿ ಪಿ.ವಿ ನರಸಿಂಹ ರಾವ್ ಅವರ ಪುತ್ರಿ ಎಸ್.ವಾಣಿ ದೇವಿ ಅವರು ಟಿಆರ್ಎಸ್ ಪಕ್ಷದಿಂದ ಸ್ಪರ್ಧಿಸಿದ್ದು ಒಟ್ಟು 163 ಮಂದಿ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.</p>.<p>ಮೆಹಬೂಬ ನಗರ–ರಂಗಾರೆಡ್ಡಿ–ಹೈದರಾಬಾದ್ ಮತ್ತು ವಾರಂಗಲ್-ಖಮ್ಮಮ್-ನಲ್ಗೊಂಡ ಪದವೀಧರರ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. ಭಾನುವಾರ ಬೆಳಿಗ್ಗೆ 8 ಗಂಟೆಗೆ ಆರಂಭವಾದ ಮತದಾನವು ಸಂಜೆ 4 ಗಂಟೆ ತನಕ ನಡೆಯಲಿದೆ. ಈ ಕ್ಷೇತ್ರಗಳಿಗಾಗಿ ಟಿಆರ್ಎಸ್, ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಇತರೆ ಪಕ್ಷಗಳು ಬಿರುಸಿನ ಪ್ರಚಾರ ಮಾಡಿದ್ದವು.</p>.<p>ಈ ತಿಂಗಳ 17ರಂದು ಮತ ಎಣಿಕೆ ನಡೆಯಲಿದೆ.</p>.<p>ಮೆಹಬೂಬ ನಗರ–ರಂಗಾರೆಡ್ಡಿ–ಹೈದರಾಬಾದ್ ಕ್ಷೇತ್ರದಲ್ಲಿ ವಾಣಿ ದೇವಿ ಸೇರಿದಂತೆ ಒಟ್ಟು 93 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ವಾರಂಗಲ್-ಖಮ್ಮಮ್-ನಲ್ಗೊಂಡ ಕ್ಷೇತ್ರಕ್ಕಾಗಿ 71 ಅಭ್ಯರ್ಥಿಗಳು ಸೆಣಸಾಡುತ್ತಿದ್ದಾರೆ.</p>.<p>ಈ ಚುನಾವಣೆಯಲ್ಲಿ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಿರುವುದರಿಂದ ದೊಡ್ಡ ಗಾತ್ರದ ಮತಪತ್ರಗಳನ್ನು ಮತ್ತು ಮತ ಪಟ್ಟಿಗೆಗಳನ್ನು ಬಳಸಲಾಗಿದೆ. ಈ ಚುನಾವಣೆಗಾಗಿ 1,530 ಮತಗಟ್ಟೆಗಳಲ್ಲಿ 10 ಲಕ್ಷಕ್ಕೂ ಹೆಚ್ಚು ಪದವೀಧರರು ಮತ ಚಲಾಯಿಸಲು ಅರ್ಹರಾಗಿದ್ದಾರೆ.</p>.<p>ಮೆಹಬೂಬ ನಗರ–ರಂಗಾರೆಡ್ಡಿ–ಹೈದರಾಬಾದ್ ಕ್ಷೇತ್ರದಲ್ಲಿ ವಾಣಿ ದೇವಿ(ಟಿಆರ್ಎಸ್), ಎನ್. ರಾಮಚಂದರ್ ರಾವ್ (ಬಿಜೆಪಿ), ಜಿ.ಚಿನ್ನ ರೆಡ್ಡಿ (ಕಾಂಗ್ರೆಸ್), ಎಲ್.ರಮಣ ಮತ್ತು ಕೆ.ನಾಗೇಶ್ವರ್ (ಟಿಡಿಪಿ)ಸ್ಪರ್ಧಿಸುತ್ತಿದ್ಧಾರೆ. ವಾರಂಗಲ್-ಖಮ್ಮಮ್-ನಲ್ಗೊಂಡದಿಂದ ಪಲ್ಲಾ ರಾಜೇಶ್ವರ ರೆಡ್ಡಿ(ಟಿಆರ್ಎಸ್), ಜಿ. ಪ್ರೇಮೆಂದರ್ ರೆಡ್ಡಿ(ಬಿಜೆಪಿ), ಎಂ.ಕೋಡಂದರಂ(ಟಿಜೆಎಸ್) ಸ್ಪರ್ಧಿಸುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೈದರಾಬಾದ್:</strong> ತೆಲಂಗಾಣ ವಿಧಾನಪರಿಷತ್ತಿನ ಎರಡು ಪದವೀಧರರ ಕ್ಷೇತ್ರಗಳಿಗೆ ಮತದಾನ ಪ್ರಕ್ರಿಯೆ ಭಾನುವಾರ ಆರಂಭವಾಗಿದೆ. ಮಾಜಿ ಪ್ರಧಾನಿ ಪಿ.ವಿ ನರಸಿಂಹ ರಾವ್ ಅವರ ಪುತ್ರಿ ಎಸ್.ವಾಣಿ ದೇವಿ ಅವರು ಟಿಆರ್ಎಸ್ ಪಕ್ಷದಿಂದ ಸ್ಪರ್ಧಿಸಿದ್ದು ಒಟ್ಟು 163 ಮಂದಿ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.</p>.<p>ಮೆಹಬೂಬ ನಗರ–ರಂಗಾರೆಡ್ಡಿ–ಹೈದರಾಬಾದ್ ಮತ್ತು ವಾರಂಗಲ್-ಖಮ್ಮಮ್-ನಲ್ಗೊಂಡ ಪದವೀಧರರ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. ಭಾನುವಾರ ಬೆಳಿಗ್ಗೆ 8 ಗಂಟೆಗೆ ಆರಂಭವಾದ ಮತದಾನವು ಸಂಜೆ 4 ಗಂಟೆ ತನಕ ನಡೆಯಲಿದೆ. ಈ ಕ್ಷೇತ್ರಗಳಿಗಾಗಿ ಟಿಆರ್ಎಸ್, ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಇತರೆ ಪಕ್ಷಗಳು ಬಿರುಸಿನ ಪ್ರಚಾರ ಮಾಡಿದ್ದವು.</p>.<p>ಈ ತಿಂಗಳ 17ರಂದು ಮತ ಎಣಿಕೆ ನಡೆಯಲಿದೆ.</p>.<p>ಮೆಹಬೂಬ ನಗರ–ರಂಗಾರೆಡ್ಡಿ–ಹೈದರಾಬಾದ್ ಕ್ಷೇತ್ರದಲ್ಲಿ ವಾಣಿ ದೇವಿ ಸೇರಿದಂತೆ ಒಟ್ಟು 93 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ವಾರಂಗಲ್-ಖಮ್ಮಮ್-ನಲ್ಗೊಂಡ ಕ್ಷೇತ್ರಕ್ಕಾಗಿ 71 ಅಭ್ಯರ್ಥಿಗಳು ಸೆಣಸಾಡುತ್ತಿದ್ದಾರೆ.</p>.<p>ಈ ಚುನಾವಣೆಯಲ್ಲಿ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಿರುವುದರಿಂದ ದೊಡ್ಡ ಗಾತ್ರದ ಮತಪತ್ರಗಳನ್ನು ಮತ್ತು ಮತ ಪಟ್ಟಿಗೆಗಳನ್ನು ಬಳಸಲಾಗಿದೆ. ಈ ಚುನಾವಣೆಗಾಗಿ 1,530 ಮತಗಟ್ಟೆಗಳಲ್ಲಿ 10 ಲಕ್ಷಕ್ಕೂ ಹೆಚ್ಚು ಪದವೀಧರರು ಮತ ಚಲಾಯಿಸಲು ಅರ್ಹರಾಗಿದ್ದಾರೆ.</p>.<p>ಮೆಹಬೂಬ ನಗರ–ರಂಗಾರೆಡ್ಡಿ–ಹೈದರಾಬಾದ್ ಕ್ಷೇತ್ರದಲ್ಲಿ ವಾಣಿ ದೇವಿ(ಟಿಆರ್ಎಸ್), ಎನ್. ರಾಮಚಂದರ್ ರಾವ್ (ಬಿಜೆಪಿ), ಜಿ.ಚಿನ್ನ ರೆಡ್ಡಿ (ಕಾಂಗ್ರೆಸ್), ಎಲ್.ರಮಣ ಮತ್ತು ಕೆ.ನಾಗೇಶ್ವರ್ (ಟಿಡಿಪಿ)ಸ್ಪರ್ಧಿಸುತ್ತಿದ್ಧಾರೆ. ವಾರಂಗಲ್-ಖಮ್ಮಮ್-ನಲ್ಗೊಂಡದಿಂದ ಪಲ್ಲಾ ರಾಜೇಶ್ವರ ರೆಡ್ಡಿ(ಟಿಆರ್ಎಸ್), ಜಿ. ಪ್ರೇಮೆಂದರ್ ರೆಡ್ಡಿ(ಬಿಜೆಪಿ), ಎಂ.ಕೋಡಂದರಂ(ಟಿಜೆಎಸ್) ಸ್ಪರ್ಧಿಸುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>