ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಪಶ್ಚಿಮ ಬಂಗಾಳ ಬಿಜೆಪಿ ನಾಯಕ ಅಮಿತ್ ಮಾಳವೀಯ ಅವರು, ತಮ್ಮ ಸಂಪುಟದ ಸಚಿವರ ಬಂಧನ ಕುರಿತು ಮಮತಾ ಬ್ಯಾನರ್ಜಿ ಅವರ ಮೌನ ನಿಜಕ್ಕೂ ಅಚ್ಚರಿ ತರಿಸಿದೆ. ಮಮತಾ ಅವರು ಚಟರ್ಜಿ ಅವರಿಂದ ಈಗ ಅಂತರ ಕಾಯ್ದುಕೊಂಡರೂ, ಅವರ ಸಂಘಟಿತ ಅಪರಾಧಗಳ ಕುರಿತು ಎಲ್ಲರಿಗೂ ತಿಳಿದಿದೆ ಎಂದು ಟೀಕಿಸಿದ್ದಾರೆ.