<p><strong>ನವದೆಹಲಿ:</strong>ಕಾಂಗ್ರೆಸ್ ಜೊತೆಗಿನ ಮೈತ್ರಿಯ ಬಗ್ಗೆ ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಅಧ್ಯಕ್ಷ ಲಾಲೂ ಪ್ರಸಾದ್ ಯಾದವ್ ಕಿಡಿಕಾರಿದ್ದಾರೆ. ಮೈತ್ರಿ ಕೂಟದಲ್ಲಿ ಆ ಪಕ್ಷದ ಉಪಯೋಗವೇನು ಎಂದು ಪ್ರಶ್ನಿಸಿರುವ ಅವರು, ಠೇವಣಿ ಕಳೆದುಕೊಳ್ಳುವ ರಾಷ್ಟ್ರೀಯ ಪಕ್ಷಕ್ಕಾಗಿ ನಾವು ವಿಧಾನಸಭೆ ಉಪಚುನಾವಣೆಯಲ್ಲಿ ಸ್ಥಾನ ಬಿಟ್ಟುಕೊಡಬೇಕೇ ಎಂದು ಪ್ರಶ್ನಿಸಿದ್ದಾರೆ.</p>.<p>ಉಪಚುನಾವಣೆ ನಡೆಯಲಿರುವ ಎರಡು ಕ್ಷೇತ್ರಗಳಲ್ಲಿ ಒಂದನ್ನು ಕಾಂಗ್ರೆಸ್ಗೆ ಬಿಟ್ಟುಕೊಡಲು ಆರ್ಜೆಡಿ ನಿರಾಕರಿಸಿದೆ. ಹೀಗಾಗಿ ಬಿಹಾರದಲ್ಲಿ ಮೈತ್ರಿ ಮುರಿದು ಬೀಳುವ ಸಾಧ್ಯತೆಯ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ, ʼಏನದು ಕಾಂಗ್ರೆಸ್ ಜೊತೆಗಿನ ಮೈತ್ರಿ?' ಎನ್ನುವ ಮೂಲಕಮೈತ್ರಿಯ ಪ್ರಯೋಜನದ ಕುರಿತು ಮರುಪ್ರಶ್ನೆ ಹಾಕಿದ್ದಾರೆ.</p>.<p>ʼಅದು (ಕಾಂಗ್ರೆಸ್) ಸೋಲುವುದಕ್ಕಾಗಿ ಸ್ಥಾನಬಿಟ್ಟುಕೊಡಬೇಕೇ? ಅದುಠೇವಣಿಯನ್ನೂ ಕಳೆದುಕೊಳ್ಳಲಿದೆʼ ಎಂದು ಹೇಳಿದ್ದಾರೆ.</p>.<p>ಬಿಹಾರ ಕಾಂಗ್ರೆಸ್ ಉಸ್ತುವಾರಿ ಭಕ್ತ ಚರಣ್ ದಾಸ್ ಅವರನ್ನೂ ಗೇಲಿ ಮಾಡಿದ್ದಾರೆ. ದಾಸ್ ಅವರು, ಬಿಹಾರದಲ್ಲಿ ಆರ್ಜೆಡಿ ನೇತೃತ್ವದ ಮೈತ್ರಿಕೂಟದ ಭಾಗವಾಗಿ ತಮ್ಮ ಪಕ್ಷ ಇರುವುದಿಲ್ಲ ಎಂದು ಇತ್ತೀಚೆಗೆ ಹೇಳಿದ್ದರು.</p>.<p>ಉಪಚುನಾವಣೆ ನಡೆಯಲಿರುವ ಕುಶೇಶ್ವರ್ ಆಸ್ತಾನ ಕ್ಷೇತ್ರದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಆರ್ಜೆಡಿ ನಿರ್ಧರಿಸಿದೆ. 2020ರ ಚುಣಾವಣೆಯಲ್ಲಿ ಕುಶೇಶ್ವರದಿಂದ ಕಾಂಗ್ರೆಸ್ ಮತ್ತು ತಾರಾಪುರದಿಂದ ಆರ್ಜೆಡಿ ಸ್ಪರ್ಧಿಸಿತ್ತು.</p>.<p>ಕಳೆದ (2020ರ) ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನಿರೀಕ್ಷಿತ ಸಂಖ್ಯೆಯಲ್ಲಿ ಸ್ಥಾನ ಗಳಿಸಲು ವಿಫಲವಾದದ್ದು, ಮೈತ್ರಿಕೂಟದಲ್ಲಿ ಆ ಪಕ್ಷದ ಸ್ಥಾನವನ್ನು ಪ್ರಶ್ನಿಸಲು ಪ್ರೇರೇಪಿಸಿದೆ.</p>.<p>243 ಸದಸ್ಯ ಬಲದ ಬಿಹಾರ ವಿಧಾನಸಭೆಚುನಾವಣೆಯಲ್ಲಿ 70 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಕೇವಲ19ಸ್ಥಾನ ಗೆದ್ದಿತ್ತು.144 ಕಡೆಗಳಲ್ಲಿ ಸ್ಪರ್ಧಿಸಿದ್ದ ಆರ್ಜೆಡಿ75 ಸ್ಥಾನಗಳನ್ನು ಜಯಿಸಿತ್ತು. ಹೀಗಾಗಿ ಕಾಂಗ್ರೆಸ್ಗೆ ಅದರ ಸಾಮರ್ಥ್ಯಕ್ಕಿಂತಲೂ ಹೆಚ್ಚಿನ ಸ್ಥಾನ ಬಿಟ್ಟುಕೊಟ್ಟಿದ್ದೆವು ಎಂದು ಆರ್ಜೆಡಿ ಪ್ರತಿಪಾದಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong>ಕಾಂಗ್ರೆಸ್ ಜೊತೆಗಿನ ಮೈತ್ರಿಯ ಬಗ್ಗೆ ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಅಧ್ಯಕ್ಷ ಲಾಲೂ ಪ್ರಸಾದ್ ಯಾದವ್ ಕಿಡಿಕಾರಿದ್ದಾರೆ. ಮೈತ್ರಿ ಕೂಟದಲ್ಲಿ ಆ ಪಕ್ಷದ ಉಪಯೋಗವೇನು ಎಂದು ಪ್ರಶ್ನಿಸಿರುವ ಅವರು, ಠೇವಣಿ ಕಳೆದುಕೊಳ್ಳುವ ರಾಷ್ಟ್ರೀಯ ಪಕ್ಷಕ್ಕಾಗಿ ನಾವು ವಿಧಾನಸಭೆ ಉಪಚುನಾವಣೆಯಲ್ಲಿ ಸ್ಥಾನ ಬಿಟ್ಟುಕೊಡಬೇಕೇ ಎಂದು ಪ್ರಶ್ನಿಸಿದ್ದಾರೆ.</p>.<p>ಉಪಚುನಾವಣೆ ನಡೆಯಲಿರುವ ಎರಡು ಕ್ಷೇತ್ರಗಳಲ್ಲಿ ಒಂದನ್ನು ಕಾಂಗ್ರೆಸ್ಗೆ ಬಿಟ್ಟುಕೊಡಲು ಆರ್ಜೆಡಿ ನಿರಾಕರಿಸಿದೆ. ಹೀಗಾಗಿ ಬಿಹಾರದಲ್ಲಿ ಮೈತ್ರಿ ಮುರಿದು ಬೀಳುವ ಸಾಧ್ಯತೆಯ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ, ʼಏನದು ಕಾಂಗ್ರೆಸ್ ಜೊತೆಗಿನ ಮೈತ್ರಿ?' ಎನ್ನುವ ಮೂಲಕಮೈತ್ರಿಯ ಪ್ರಯೋಜನದ ಕುರಿತು ಮರುಪ್ರಶ್ನೆ ಹಾಕಿದ್ದಾರೆ.</p>.<p>ʼಅದು (ಕಾಂಗ್ರೆಸ್) ಸೋಲುವುದಕ್ಕಾಗಿ ಸ್ಥಾನಬಿಟ್ಟುಕೊಡಬೇಕೇ? ಅದುಠೇವಣಿಯನ್ನೂ ಕಳೆದುಕೊಳ್ಳಲಿದೆʼ ಎಂದು ಹೇಳಿದ್ದಾರೆ.</p>.<p>ಬಿಹಾರ ಕಾಂಗ್ರೆಸ್ ಉಸ್ತುವಾರಿ ಭಕ್ತ ಚರಣ್ ದಾಸ್ ಅವರನ್ನೂ ಗೇಲಿ ಮಾಡಿದ್ದಾರೆ. ದಾಸ್ ಅವರು, ಬಿಹಾರದಲ್ಲಿ ಆರ್ಜೆಡಿ ನೇತೃತ್ವದ ಮೈತ್ರಿಕೂಟದ ಭಾಗವಾಗಿ ತಮ್ಮ ಪಕ್ಷ ಇರುವುದಿಲ್ಲ ಎಂದು ಇತ್ತೀಚೆಗೆ ಹೇಳಿದ್ದರು.</p>.<p>ಉಪಚುನಾವಣೆ ನಡೆಯಲಿರುವ ಕುಶೇಶ್ವರ್ ಆಸ್ತಾನ ಕ್ಷೇತ್ರದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಆರ್ಜೆಡಿ ನಿರ್ಧರಿಸಿದೆ. 2020ರ ಚುಣಾವಣೆಯಲ್ಲಿ ಕುಶೇಶ್ವರದಿಂದ ಕಾಂಗ್ರೆಸ್ ಮತ್ತು ತಾರಾಪುರದಿಂದ ಆರ್ಜೆಡಿ ಸ್ಪರ್ಧಿಸಿತ್ತು.</p>.<p>ಕಳೆದ (2020ರ) ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನಿರೀಕ್ಷಿತ ಸಂಖ್ಯೆಯಲ್ಲಿ ಸ್ಥಾನ ಗಳಿಸಲು ವಿಫಲವಾದದ್ದು, ಮೈತ್ರಿಕೂಟದಲ್ಲಿ ಆ ಪಕ್ಷದ ಸ್ಥಾನವನ್ನು ಪ್ರಶ್ನಿಸಲು ಪ್ರೇರೇಪಿಸಿದೆ.</p>.<p>243 ಸದಸ್ಯ ಬಲದ ಬಿಹಾರ ವಿಧಾನಸಭೆಚುನಾವಣೆಯಲ್ಲಿ 70 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಕೇವಲ19ಸ್ಥಾನ ಗೆದ್ದಿತ್ತು.144 ಕಡೆಗಳಲ್ಲಿ ಸ್ಪರ್ಧಿಸಿದ್ದ ಆರ್ಜೆಡಿ75 ಸ್ಥಾನಗಳನ್ನು ಜಯಿಸಿತ್ತು. ಹೀಗಾಗಿ ಕಾಂಗ್ರೆಸ್ಗೆ ಅದರ ಸಾಮರ್ಥ್ಯಕ್ಕಿಂತಲೂ ಹೆಚ್ಚಿನ ಸ್ಥಾನ ಬಿಟ್ಟುಕೊಟ್ಟಿದ್ದೆವು ಎಂದು ಆರ್ಜೆಡಿ ಪ್ರತಿಪಾದಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>