<p class="bodytext"><strong>ನವದೆಹಲಿ (ಪಿಟಿಐ):</strong> ‘ದೇಶದಲ್ಲಿ ದೃಢವಾದ ಮತ್ತು ವ್ಯವಸ್ಥಿತ ಮರಣ ನೋಂದಣಿ ವ್ಯವಸ್ಥೆ ಇರುವುದರಿಂದ ಕೋವಿಡ್ನಿಂದಾದ ಮರಣ ಪ್ರಕರಣಗಳು ಲೆಕ್ಕಕ್ಕೆ ಸಿಗದಿರುವುದು ಸಂಪೂರ್ಣ ಅಸಂಭವ’ ಎಂದು ಕೇಂದ್ರ ಆರೋಗ್ಯ ಸಚಿವಾಲಯಬುಧವಾರ ಸ್ಪಷ್ಟಪಡಿಸಿದೆ.</p>.<p class="bodytext">ಕೊರೊನಾ ಎರಡನೇ ಅಲೆ ಉತ್ತುಂಗದಲ್ಲಿದ್ದಾಗ, ದೇಶದಾದ್ಯಂತ ಆರೋಗ್ಯ ವ್ಯವಸ್ಥೆಯು ವೈದ್ಯಕೀಯ ಸಹಾಯದ ಅಗತ್ಯವಿರುವ ಪ್ರಕರಣಗಳ ಪರಿಣಾಮಕಾರಿ ವೈದ್ಯಕೀಯ ನಿರ್ವಹಣೆಯ ಮೇಲೆ ಕೇಂದ್ರೀಕೃತವಾಗಿತ್ತು. ಇದರಿಂದಾಗಿ ಕೋವಿಡ್ ಮರಣಗಳ ಸರಿಯಾದ ವರದಿ ಮತ್ತು ದಾಖಲೀಕರಣದಲ್ಲಿ ವಿಳಂಬವಾಗಿರಬಹುದು. ಆದರೆ ಅದನ್ನು ನಂತರದಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಮರುಹೊಂದಾಣಿಕೆ ಮಾಡಿವೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.</p>.<p>ಮರಣ ಸಂಖ್ಯೆಯ ಮರುಹೊಂದಾಣಿಕೆಯನ್ನು ಈಗಲೂ ನಡೆಸಲಾಗುತ್ತಿದೆ. ಇದು ಕೋವಿಡ್ -19ರಿಂದ ಉಂಟಾದ ಮರಣಗಳ ವರದಿ ಮತ್ತು ಕಡಿಮೆ ಎಣಿಕೆಯ ಎಲ್ಲ ಊಹೆಗಳನ್ನು ನಿವಾರಿಸುತ್ತದೆ ಎಂದು ಅದು ಹೇಳಿದೆ.</p>.<p>‘2020ರ ಡಿಸೆಂಬರ್31ರ ವೇಳೆಗೆ ಸಾವಿನ ಪ್ರಮಾಣ ಶೇ 1.45 ರಷ್ಟಿತ್ತು, 2021ರಏಪ್ರಿಲ್-ಮೇನಲ್ಲಿ ಎರಡನೇ ಅಲೆ ಅನಿರೀಕ್ಷಿತವಾಗಿ ಏರಿಕೆಯಾದಾಗಲೂ ಸಾವಿನ ಪ್ರಮಾಣ ಈಗಲೂ ಶೇ 1.34ರಷ್ಟಿದೆ’ ಎಂದು ಸಚಿವಾಲಯ ಹೇಳಿದೆ.</p>.<p><a href="https://www.prajavani.net/karnataka-news/list-of-karnataka-ministers-in-basavaraj-bommai-cabinet-bjp-854558.html" itemprop="url">ಬೊಮ್ಮಾಯಿ ಸಂಪುಟ: 29 ಮಂದಿ ನೂತನ ಸಚಿವರ ಪಟ್ಟಿ ಇಲ್ಲಿದೆ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="bodytext"><strong>ನವದೆಹಲಿ (ಪಿಟಿಐ):</strong> ‘ದೇಶದಲ್ಲಿ ದೃಢವಾದ ಮತ್ತು ವ್ಯವಸ್ಥಿತ ಮರಣ ನೋಂದಣಿ ವ್ಯವಸ್ಥೆ ಇರುವುದರಿಂದ ಕೋವಿಡ್ನಿಂದಾದ ಮರಣ ಪ್ರಕರಣಗಳು ಲೆಕ್ಕಕ್ಕೆ ಸಿಗದಿರುವುದು ಸಂಪೂರ್ಣ ಅಸಂಭವ’ ಎಂದು ಕೇಂದ್ರ ಆರೋಗ್ಯ ಸಚಿವಾಲಯಬುಧವಾರ ಸ್ಪಷ್ಟಪಡಿಸಿದೆ.</p>.<p class="bodytext">ಕೊರೊನಾ ಎರಡನೇ ಅಲೆ ಉತ್ತುಂಗದಲ್ಲಿದ್ದಾಗ, ದೇಶದಾದ್ಯಂತ ಆರೋಗ್ಯ ವ್ಯವಸ್ಥೆಯು ವೈದ್ಯಕೀಯ ಸಹಾಯದ ಅಗತ್ಯವಿರುವ ಪ್ರಕರಣಗಳ ಪರಿಣಾಮಕಾರಿ ವೈದ್ಯಕೀಯ ನಿರ್ವಹಣೆಯ ಮೇಲೆ ಕೇಂದ್ರೀಕೃತವಾಗಿತ್ತು. ಇದರಿಂದಾಗಿ ಕೋವಿಡ್ ಮರಣಗಳ ಸರಿಯಾದ ವರದಿ ಮತ್ತು ದಾಖಲೀಕರಣದಲ್ಲಿ ವಿಳಂಬವಾಗಿರಬಹುದು. ಆದರೆ ಅದನ್ನು ನಂತರದಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಮರುಹೊಂದಾಣಿಕೆ ಮಾಡಿವೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.</p>.<p>ಮರಣ ಸಂಖ್ಯೆಯ ಮರುಹೊಂದಾಣಿಕೆಯನ್ನು ಈಗಲೂ ನಡೆಸಲಾಗುತ್ತಿದೆ. ಇದು ಕೋವಿಡ್ -19ರಿಂದ ಉಂಟಾದ ಮರಣಗಳ ವರದಿ ಮತ್ತು ಕಡಿಮೆ ಎಣಿಕೆಯ ಎಲ್ಲ ಊಹೆಗಳನ್ನು ನಿವಾರಿಸುತ್ತದೆ ಎಂದು ಅದು ಹೇಳಿದೆ.</p>.<p>‘2020ರ ಡಿಸೆಂಬರ್31ರ ವೇಳೆಗೆ ಸಾವಿನ ಪ್ರಮಾಣ ಶೇ 1.45 ರಷ್ಟಿತ್ತು, 2021ರಏಪ್ರಿಲ್-ಮೇನಲ್ಲಿ ಎರಡನೇ ಅಲೆ ಅನಿರೀಕ್ಷಿತವಾಗಿ ಏರಿಕೆಯಾದಾಗಲೂ ಸಾವಿನ ಪ್ರಮಾಣ ಈಗಲೂ ಶೇ 1.34ರಷ್ಟಿದೆ’ ಎಂದು ಸಚಿವಾಲಯ ಹೇಳಿದೆ.</p>.<p><a href="https://www.prajavani.net/karnataka-news/list-of-karnataka-ministers-in-basavaraj-bommai-cabinet-bjp-854558.html" itemprop="url">ಬೊಮ್ಮಾಯಿ ಸಂಪುಟ: 29 ಮಂದಿ ನೂತನ ಸಚಿವರ ಪಟ್ಟಿ ಇಲ್ಲಿದೆ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>