‘ವಿಜಯಾನಂದ ಕಾಶಪ್ಪನವರು ರಾಷ್ಟ್ರೀಯ ಮಟ್ಟದ ನಾಯಕರು. ಅವರಷ್ಟು ದೊಡ್ಡ ನಾಯಕರು ನಾವಲ್ಲ. ಮೀಸಲಾತಿಗೆ ನಾವು ಮುಂದಾಳತ್ವ ವಹಿಸುವುದಿಲ್ಲ. ಅದನ್ನು ಅವರಿಗೆ ಬಿಟ್ಟಿದ್ದೇವೆ. ದೇವರು ಅವರಿಗೆ ಎಷ್ಟು ಶಕ್ತಿ, ಸಾಮರ್ಥ್ಯ ನೀಡಿದ್ದಾನೆಯೋ ಅಷ್ಟು ಹೋರಾಟ ಮಾಡಲಿ. ಸರ್ಕಾರದ ಭಾಗವಾಗಿ ಕೇವಲ ಪಂಚಮಸಾಲಿ ಸಮಾಜಕ್ಕಲ್ಲ,ಒಟ್ಟಾರೆ ವೀರಶೈವ-ಲಿಂಗಾಯತ ಸಮಾಜಕ್ಕೆ ಏನು ಮಾಡಬೇಕೋ ಅದನ್ನು ಮಾಡಲಿದ್ದೇವೆ’ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.