ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ‘ಹುಬ್ಬಳ್ಳಿಯ ನೃಪತುಂಗ ಗುಡ್ಡದ ಬಳಿ ಚಿರತೆ ಬಂದು ಎಂಟು ದಿನ ಕಳೆದಿವೆ. ನನ್ನ ಮನೆಯೂ ಅಲ್ಲೆ ಇದೆ. ಚಿರತೆಯ ಹೆಜ್ಜೆ ಗುರುತು ಕಾಣಿಸಿದೆ. ಅದು ಪ್ರಾಯಕ್ಕೆ ಬಂದ ಚಿರತೆಯಾಗಿದ್ದು, ಮನುಷ್ಯರಿಗೆ ಏನೂ ಮಾಡುವುದಿಲ್ಲ. ಈಗಾಗಲೇ ಹಂದಿ, ಕುರಿಯನ್ನು ಹೊತ್ತುಕೊಂಡು ಹೋಗಿದೆ. ಸುತ್ತಮುತ್ತಲಿನ ಶಾಲೆಗಳು ಒಂದು ವಾರದಿಂದ ಬಂದ್ ಆಗಿವೆ ಎಂದರು.