ಬೆಂಗಳೂರಿನ ಅಪಾರ್ಟ್ಮೆಂಟ್ನ ಫ್ಲ್ಯಾಟ್ ಒಂದರ ಬಾಲ್ಕನಿಯಿಂದ ಹಿಮಾಚಲ ಪ್ರದೇಶದವರಾದ ಗಗನಸಖಿ ಅರ್ಚನಾ ಧಿಮಾನ್ (28) ಅವರನ್ನು ಕೆಳಕ್ಕೆ ತಳ್ಳಿ ಕೊಲೆ ಮಾಡಿರುವ ಆರೋಪದಲ್ಲಿ ಈತನನ್ನು ಬಂಧಿಸಲಾಗಿದೆ. ಬೆಂಗಳೂರು– ದುಬೈ ಮಾರ್ಗದ ವಿಮಾನದಲ್ಲಿ ಅರ್ಚನಾ ಗಗನಸಖಿಯಾಗಿದ್ದರು. ಅರ್ಚನಾ ಅವರ ತಾಯಿ ನೀಡರುವ ದೂರಿನ ಆಧಾರದ ಮೇಲೆ ತನಿಖೆ ಆರಂಭಿಸಿರುವ ಪೊಲೀಸರು ಆದರ್ಶನನ್ನು ಮಂಗಳವಾರ ಬಂಧಿಸಿದ್ದಾರೆ ಎಂದು ಕಾಸರಗೋಡು ಪೊಲೀಸ್ ಮೂಲಗಳು ತಿಳಿಸಿವೆ.