ಬೆಂಗಳೂರು: ವಿಮಾನ ವಿಳಂಬ ಕಾರಣ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಧ್ಯಾಹ್ನ 3.30ರ ಬದಲು ಸಂಜೆ 5.30ಕ್ಕೆ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಬರಲಿದ್ದಾರೆ. ದೆಹಲಿಯಲ್ಲಿ ಮಂಜು ಕವಿದ ಕಾರಣ ಶಾ ಅವರು ಹೊರಟ ವಾಯುಪಡೆಯ ವಿಮಾನ ಟೇಕಾಫ್ ವಿಳಂಬವಾಗಿತ್ತು.
ಎಚ್ಎಎಲ್ ವಿಮಾನ ನಿಲ್ದಾಣದಿಂದ ಅನಿಲ್ ಕುಂಬ್ಳೆ ವೃತ್ತದ ವರೆಗೂ ಬಿಜೆಪಿ ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಲಿದ್ದಾರೆ ಎಂದು ಬಿಜೆಪಿ ಮಾಧ್ಯಮ ವಿಭಾಗದ ರಾಜ್ಯ ಸಂಚಾಲಕ ಕರುಣಾಕರ್ ಖಾಸಲೆ ತಿಳಿಸಿದ್ದಾರೆ.