<p><strong>ದಾವಣಗೆರೆ</strong>: ಮಕ್ಕಳು, ಗರ್ಭಿಣಿಯರು ಮತ್ತು ಬಾಣಂತಿಯರಿಗೆ ನೀಡುವ ಮೊಟ್ಟೆಯ ₹ 2 ಹೆಚ್ಚುವರಿ ಹಣ ಬಿಡುಗಡೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮಾಡಿರುವ ಆದೇಶವನ್ನು ಗ್ರಾಮ ಪಂಚಾಯಿತಿಗಳು ಪಾಲಿಸದಿರುವುದರಿಂದ ಅಂಗನವಾಡಿ ಕಾರ್ಯಕರ್ತೆಯರು ತೊಂದರೆಗೆ ಸಿಲುಕಿದ್ದಾರೆ.</p>.<p>ಸರ್ಕಾರವು ಒಂದು ಮೊಟ್ಟೆಗೆ ₹ 5 ದರ ನಿಗದಿಪಡಿಸಿದೆ. ಈಚೆಗೆ ಮಾರುಕಟ್ಟೆಯಲ್ಲಿ ದರ ಹೆಚ್ಚಾಗಿರುವುದರಿಂದ ₹ 7ಕ್ಕೆ ಹೆಚ್ಚಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಮನವಿ ಮಾಡಿತ್ತು.</p>.<p>ಅಂಗನವಾಡಿ ಕೇಂದ್ರಕ್ಕೆ ಖರೀದಿಸುವ ಮೊಟ್ಟೆಗಳ ಹೆಚ್ಚುವರಿ ಹಣವನ್ನುಸ್ವಂತ ಸಂಪನ್ಮೂಲದಿಂದ ಭರಿಸುವಂತೆ ಗ್ರಾಮ ಪಂಚಾಯಿತಿಗಳಿಗೆ ಇಲಾಖೆ ಆದೇಶಿಸಿತ್ತು. ಆದರೆ, ಗ್ರಾಮ ಪಂಚಾಯಿತಿಗಳು ಆದೇಶವನ್ನು ಪಾಲಿಸುತ್ತಿಲ್ಲ. ಹೆಚ್ಚುವರಿ ಹಣದ ಹೊರೆಯನ್ನು ಕಾರ್ಯಕರ್ತೆಯರೇ ಹೊರುವಂತಾಗಿದೆ.</p>.<p>‘ಫಲಾನುಭವಿಗಳಿಗೆ ಮೊಟ್ಟೆ ವಿತರಿಸಲು ಸರ್ಕಾರವು ಮುಂಗಡವಾಗಿ ಹಣ ಬಿಡುಗಡೆ ಮಾಡದ್ದರಿಂದ ಕೈಯಿಂದ ಹಣ ಹಾಕಿ ಮೊಟ್ಟೆಗಳನ್ನು ವಿತರಿಸಿ, ನಂತರ ಬಿಲ್ ಕಳುಹಿಸಿ ಹಣ ಪಡೆದುಕೊಳ್ಳುತ್ತಿದ್ದೇವೆ. ಮೊಟ್ಟೆಗೆ ತಗಲುವ ಹೆಚ್ಚುವರಿ ಹಣವನ್ನೂ ನಾವೇ ಭರಿಸಬೇಕು. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಮೊಟ್ಟೆ ವಿತರಣೆ ನಿಲ್ಲಿಸಬೇಡಿ ಎನ್ನುತ್ತಾರೆ. ಮೊಟ್ಟೆ ವಿತರಣೆಯಲ್ಲಿ ವ್ಯತ್ಯಾಸವಾದರೆ ಫಲಾನುಭವಿಗಳು ದೂರುತ್ತಾರೆ. ಅಡಕತ್ತರಿ ನಡುವೆ ಸಿಕ್ಕಿದ ಹಾಗಾಗಿದೆ ನಮ್ಮ ಸ್ಥಿತಿ’ ಎನ್ನುವುದು ಅಂಗನವಾಡಿ ಕಾರ್ಯಕರ್ತೆಯರ ಅಳಲು.</p>.<p>‘ಹೆಚ್ಚುವರಿ ಹಣ ಬಿಡುಗಡೆ ಮಾಡುವಂತೆ ಗ್ರಾಮ ಪಂಚಾಯಿತಿಗಳಿಗೆ ಕೇಳಿದರೆ, ಕೊರೊನಾದಿಂದಾಗಿ ತೆರಿಗೆ ಸಂಗ್ರಹಿಸಿಲ್ಲ. ಸಣ್ಣಪುಟ್ಟ ಉಸ್ತುವಾರಿಗೇ ಹಣವಿಲ್ಲ ಎನ್ನುತ್ತಾರೆ. ಮನೆ ಮನೆಗೆ ತೆರಳಿ ತೆರಿಗೆ ಸಂಗ್ರಹಿಸಿ, ಜಾಬ್ ಕಾರ್ಡ್ ಮಾಡಿಸಿಕೊಡಿ ಎಂದು ಪಂಚಾಯಿತಿ ಕೆಲಸಗಳನ್ನೂ ನಮಗೇ ಹೇಳುತ್ತಾರೆ’ ಎಂದೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.</p>.<p><strong>ಕುಕ್ಕುಟ ಮಹಾಮಂಡಳದಿಂದ ವಿತರಿಸಲಿ:</strong>ನಗರವಿರಲಿ, ಹಳ್ಳಿ ಇರಲಿ ಒಂದು ಮೊಟ್ಟೆಗೆ ₹ 5 ನಿಗದಿಪಡಿಸಿರುವುದರಿಂದ ಹೆಚ್ಚುವರಿ ಹಣವನ್ನು ಕಾರ್ಯಕರ್ತೆಯರು ಕೈಯಿಂದ ಹಾಕುತ್ತಿದ್ದಾರೆ. ಹಾಗಾಗಿ ಮೊಟ್ಟೆ ಖರೀದಿಸಲು ಕಾರ್ಯಕರ್ತೆಯರಿಗೆ ಮುಂಗಡವಾಗಿ ಹಣ ಬಿಡುಗಡೆ ಮಾಡಬೇಕು. ಇಲ್ಲವೇ ಕುಕ್ಕುಟ ಮಹಾಮಂಡಳದಿಂದ ಮೊಟ್ಟೆಗಳನ್ನು ವಿತರಿಸಲು ಕ್ರಮ ಕೈಗೊಳ್ಳಬೇಕು. ಫಲಾನುಭವಿಗಳಿಗೆ ಮೊಟ್ಟೆ ವಿತರಿಸಲು ತಿಂಗಳಿಗೆ ₹ 5 ಕೋಟಿ ವೆಚ್ಚವಾಗುತ್ತದೆ. ಅದರಲ್ಲಿ ಸಚಿವರಿಗೆ ₹ 1 ಕೋಟಿ, ಟೆಂಡರ್ ಕುದುರಿಸಿದ ಶಾಸಕರಿಗೆ ₹ 50 ಲಕ್ಷ , ಏಜೆನ್ಸಿ ಪಡೆದ ವ್ಯಕ್ತಿ ಮತ್ತು ಸರಬರಾಜು ವೆಚ್ಚ ಕಳೆದು ಮಿಕ್ಕುವ ಹಣದಲ್ಲಿ ಎಷ್ಟರಮಟ್ಟಿಗೆ ಮೊಟ್ಟೆಗಳನ್ನು ವಿತರಿಸಲು ಸಾಧ್ಯ? ಸಂಬಂಧಪಟ್ಟವರು ಕಾರ್ಯಕರ್ತೆಯರಿಗೆ ಎದುರಾಗಿರುವ ಸಮಸ್ಯೆ ಪರಿಹರಿಸಲು ಮುಂದಾಗಬೇಕು.</p>.<p><strong>-ಎಸ್. ವರಲಕ್ಷ್ಮಿ, ಅಧ್ಯಕ್ಷೆ, ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ (ಸಿಐಟಿಯು)</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ</strong>: ಮಕ್ಕಳು, ಗರ್ಭಿಣಿಯರು ಮತ್ತು ಬಾಣಂತಿಯರಿಗೆ ನೀಡುವ ಮೊಟ್ಟೆಯ ₹ 2 ಹೆಚ್ಚುವರಿ ಹಣ ಬಿಡುಗಡೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮಾಡಿರುವ ಆದೇಶವನ್ನು ಗ್ರಾಮ ಪಂಚಾಯಿತಿಗಳು ಪಾಲಿಸದಿರುವುದರಿಂದ ಅಂಗನವಾಡಿ ಕಾರ್ಯಕರ್ತೆಯರು ತೊಂದರೆಗೆ ಸಿಲುಕಿದ್ದಾರೆ.</p>.<p>ಸರ್ಕಾರವು ಒಂದು ಮೊಟ್ಟೆಗೆ ₹ 5 ದರ ನಿಗದಿಪಡಿಸಿದೆ. ಈಚೆಗೆ ಮಾರುಕಟ್ಟೆಯಲ್ಲಿ ದರ ಹೆಚ್ಚಾಗಿರುವುದರಿಂದ ₹ 7ಕ್ಕೆ ಹೆಚ್ಚಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಮನವಿ ಮಾಡಿತ್ತು.</p>.<p>ಅಂಗನವಾಡಿ ಕೇಂದ್ರಕ್ಕೆ ಖರೀದಿಸುವ ಮೊಟ್ಟೆಗಳ ಹೆಚ್ಚುವರಿ ಹಣವನ್ನುಸ್ವಂತ ಸಂಪನ್ಮೂಲದಿಂದ ಭರಿಸುವಂತೆ ಗ್ರಾಮ ಪಂಚಾಯಿತಿಗಳಿಗೆ ಇಲಾಖೆ ಆದೇಶಿಸಿತ್ತು. ಆದರೆ, ಗ್ರಾಮ ಪಂಚಾಯಿತಿಗಳು ಆದೇಶವನ್ನು ಪಾಲಿಸುತ್ತಿಲ್ಲ. ಹೆಚ್ಚುವರಿ ಹಣದ ಹೊರೆಯನ್ನು ಕಾರ್ಯಕರ್ತೆಯರೇ ಹೊರುವಂತಾಗಿದೆ.</p>.<p>‘ಫಲಾನುಭವಿಗಳಿಗೆ ಮೊಟ್ಟೆ ವಿತರಿಸಲು ಸರ್ಕಾರವು ಮುಂಗಡವಾಗಿ ಹಣ ಬಿಡುಗಡೆ ಮಾಡದ್ದರಿಂದ ಕೈಯಿಂದ ಹಣ ಹಾಕಿ ಮೊಟ್ಟೆಗಳನ್ನು ವಿತರಿಸಿ, ನಂತರ ಬಿಲ್ ಕಳುಹಿಸಿ ಹಣ ಪಡೆದುಕೊಳ್ಳುತ್ತಿದ್ದೇವೆ. ಮೊಟ್ಟೆಗೆ ತಗಲುವ ಹೆಚ್ಚುವರಿ ಹಣವನ್ನೂ ನಾವೇ ಭರಿಸಬೇಕು. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಮೊಟ್ಟೆ ವಿತರಣೆ ನಿಲ್ಲಿಸಬೇಡಿ ಎನ್ನುತ್ತಾರೆ. ಮೊಟ್ಟೆ ವಿತರಣೆಯಲ್ಲಿ ವ್ಯತ್ಯಾಸವಾದರೆ ಫಲಾನುಭವಿಗಳು ದೂರುತ್ತಾರೆ. ಅಡಕತ್ತರಿ ನಡುವೆ ಸಿಕ್ಕಿದ ಹಾಗಾಗಿದೆ ನಮ್ಮ ಸ್ಥಿತಿ’ ಎನ್ನುವುದು ಅಂಗನವಾಡಿ ಕಾರ್ಯಕರ್ತೆಯರ ಅಳಲು.</p>.<p>‘ಹೆಚ್ಚುವರಿ ಹಣ ಬಿಡುಗಡೆ ಮಾಡುವಂತೆ ಗ್ರಾಮ ಪಂಚಾಯಿತಿಗಳಿಗೆ ಕೇಳಿದರೆ, ಕೊರೊನಾದಿಂದಾಗಿ ತೆರಿಗೆ ಸಂಗ್ರಹಿಸಿಲ್ಲ. ಸಣ್ಣಪುಟ್ಟ ಉಸ್ತುವಾರಿಗೇ ಹಣವಿಲ್ಲ ಎನ್ನುತ್ತಾರೆ. ಮನೆ ಮನೆಗೆ ತೆರಳಿ ತೆರಿಗೆ ಸಂಗ್ರಹಿಸಿ, ಜಾಬ್ ಕಾರ್ಡ್ ಮಾಡಿಸಿಕೊಡಿ ಎಂದು ಪಂಚಾಯಿತಿ ಕೆಲಸಗಳನ್ನೂ ನಮಗೇ ಹೇಳುತ್ತಾರೆ’ ಎಂದೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.</p>.<p><strong>ಕುಕ್ಕುಟ ಮಹಾಮಂಡಳದಿಂದ ವಿತರಿಸಲಿ:</strong>ನಗರವಿರಲಿ, ಹಳ್ಳಿ ಇರಲಿ ಒಂದು ಮೊಟ್ಟೆಗೆ ₹ 5 ನಿಗದಿಪಡಿಸಿರುವುದರಿಂದ ಹೆಚ್ಚುವರಿ ಹಣವನ್ನು ಕಾರ್ಯಕರ್ತೆಯರು ಕೈಯಿಂದ ಹಾಕುತ್ತಿದ್ದಾರೆ. ಹಾಗಾಗಿ ಮೊಟ್ಟೆ ಖರೀದಿಸಲು ಕಾರ್ಯಕರ್ತೆಯರಿಗೆ ಮುಂಗಡವಾಗಿ ಹಣ ಬಿಡುಗಡೆ ಮಾಡಬೇಕು. ಇಲ್ಲವೇ ಕುಕ್ಕುಟ ಮಹಾಮಂಡಳದಿಂದ ಮೊಟ್ಟೆಗಳನ್ನು ವಿತರಿಸಲು ಕ್ರಮ ಕೈಗೊಳ್ಳಬೇಕು. ಫಲಾನುಭವಿಗಳಿಗೆ ಮೊಟ್ಟೆ ವಿತರಿಸಲು ತಿಂಗಳಿಗೆ ₹ 5 ಕೋಟಿ ವೆಚ್ಚವಾಗುತ್ತದೆ. ಅದರಲ್ಲಿ ಸಚಿವರಿಗೆ ₹ 1 ಕೋಟಿ, ಟೆಂಡರ್ ಕುದುರಿಸಿದ ಶಾಸಕರಿಗೆ ₹ 50 ಲಕ್ಷ , ಏಜೆನ್ಸಿ ಪಡೆದ ವ್ಯಕ್ತಿ ಮತ್ತು ಸರಬರಾಜು ವೆಚ್ಚ ಕಳೆದು ಮಿಕ್ಕುವ ಹಣದಲ್ಲಿ ಎಷ್ಟರಮಟ್ಟಿಗೆ ಮೊಟ್ಟೆಗಳನ್ನು ವಿತರಿಸಲು ಸಾಧ್ಯ? ಸಂಬಂಧಪಟ್ಟವರು ಕಾರ್ಯಕರ್ತೆಯರಿಗೆ ಎದುರಾಗಿರುವ ಸಮಸ್ಯೆ ಪರಿಹರಿಸಲು ಮುಂದಾಗಬೇಕು.</p>.<p><strong>-ಎಸ್. ವರಲಕ್ಷ್ಮಿ, ಅಧ್ಯಕ್ಷೆ, ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ (ಸಿಐಟಿಯು)</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>