ಭಾನುವಾರ ಕಾಂಗ್ರೆಸ್ ಆಯೋಜಿಸಿದ್ದ’ಗಾಂಧಿ ನಡಿಗೆ’ ಕಾರ್ಯಕ್ರಮ ನಂತರ, ಸಿದ್ದರಾಮಯ್ಯ ಬಡವರಿಗೆ ಅಕ್ಕಿ ಕೊಡಲಿಲ್ಲ ಎಂಬ ಕುಮಾರಸ್ವಾಮಿ ಟ್ವೀಟ್ಗೆ ಪ್ರತಿಕ್ರಿಯಿಸಿದ ಅವರು, ’2013ರಿಂದ 2018ರವರೆಗೂ ಮೊದಲ ಒಂದು ವರ್ಷ ಕೆಜಿಗೆ ₹1ರಂತೆ ನಂತರ, ಎರಡು ವರ್ಷ ಉಚಿತವಾಗಿ ಅಕ್ಕಿ ಕೊಟ್ಟೆ. ಮತ್ತೆ ಎರಡು ವರ್ಷ ತಲಾ 7ಕೆ.ಜಿಯಂತೆ ಅಕ್ಕಿ ಕೊಟ್ಟಿದ್ದೇನೆ’ ಎಂದರು.