‘ಜೈಲಿನ ಅಧಿಕಾರಿಗಳು ಹೇಗಿರುತ್ತಾರೆ ಎಂಬುದಕ್ಕೆ ಮೊತ್ತೊಂದು ಘಟನೆ ನೆನಪಿಗೆ ಬರುತ್ತದೆ. ಒಮ್ಮೆ ನಮ್ಮ ಕಡೆಯವರು ಬಂಧನಕ್ಕೆ ಒಳಗಾಗಿದ್ದರು. ಅವರನ್ನು ಬಿಡಿಸಿಕೊಂಡು ಬರಲು ನಾವು ಒಂದು ಬಸ್ ಜನ ಹೋಗಿದ್ದೆವು. ಬಿಡುಗಡೆಗೆ ಮ್ಯಾಜಿಸ್ಟ್ರೇಟರು ಆದೇಶ ನೀಡಿದ್ದರು. ಆದರೆ, ಜೈಲು ಅಧಿಕಾರಿ ಬಿಡಲು ಒಪ್ಪಲಿಲ್ಲ. ಬಳಿಕ ಯಾರೋ ಹೇಳಿದರು, ಆತ ಹಣ ಕೊಡದೇ ಬಿಡುವುದಿಲ್ಲ ಎಂದು. ಆಗ ನನ್ನ ಬಳಿ ಇದ್ದದ್ದು ₹8,000 ಮಾರನೇ ದಿನದವರೆಗೆ ಕಾಯುವ ಸ್ಥಿತಿ ಇರಲಿಲ್ಲ. ಆ ಹಣವನ್ನು ಅವರ ಎದೆಯ ಮೇಲೆ ಹಾಕಿ ಬಿಡಿಸಿಕೊಂಡು ಬಂದೆವು’ ಎಂದು ಹೇಳಿದರು.