ಬಾದಾಮಿ (ಬಾಗಲಕೋಟೆ): ಸರ್ಕಾರದ ಸೂಚನೆಯಂತೆ ಈ ವರ್ಷ ಬನಶಂಕರಿದೇವಿ ಜಾತ್ರೆಯನ್ನು ರದ್ದು ಮಾಡಲು ಜಿಲ್ಲಾಡಳಿತ ನಿರ್ಣಯ ಕೈಗೊಂಡಿದೆ.
ತಾಲ್ಲೂಕು ಆಡಳಿತ ಶುಕ್ರವಾರ ಹಮ್ಮಿಕೊಂಡ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಡಿವೈಎಸ್ಪಿ ಚಂದ್ರಕಾಂತ ನಂದರಡ್ಡಿ, ಕೋವಿಡ್ ಹಿನ್ನೆಲೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಬನಶಂಕರಿದೇವಿ ಟ್ರಸ್ಟ್ ಕಮಿಟಿಯವರು ತಮ್ಮ ಪರಿವಾರದೊಂದಿಗೆ ದೇವಿಪೂಜೆ ಮಾಡಬಹುದು ಎಂದರು.