ಬೆಂಗಳೂರು– ಮೈಸೂರು ದಶಪಥ ಇದೀಗ ಬೋಟ್ ಪಥ: ಕಾಂಗ್ರೆಸ್ ಟೀಕೆ

ಬೆಂಗಳೂರು: ಬೆಂಗಳೂರು– ಮೈಸೂರು ದಶಪಥ ಹೆದ್ದಾರಿ ಯೋಜನೆಯು ಇದೀಗ, ಒಂದೇ ಮಳೆಗೆ ಏಕಪಥ ರಸ್ತೆಯಾಗಿದೆ. ಇನ್ನೆರಡು ಬೋಟ್ ಪಥವಾಗಿ ಮಾರ್ಪಟ್ಟಿವೆ ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ.
ಬೆಂಗಳೂರು– ಮೈಸೂರು ದಶಪಥ ಹೆದ್ದಾರಿ ವಿಚಾರ ಪ್ರಸ್ತಾಪಿಸಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಬಿಜೆಪಿ ಸರ್ಕಾರದವರ ಮುಂದಾಲೋಚನೆಯಿಂದ ಈ ಜಲಸಾರಿಗೆ ಮಾರ್ಗಗಳನ್ನೂ ನಿರ್ಮಿಸಿದ್ದಾರೆ. ಶೀಘ್ರದಲ್ಲಿಯೇ ಪ್ರಧಾನಿ ನರೇಂದ್ರ ಮೋದಿಯವರು ಬೋಟ್ ಪ್ರಯಾಣ ಮಾಡಿ ಉದ್ಘಾಟಿಸಲಿದ್ದಾರೆ ಎಂದು ಟೀಕಿಸಿದೆ.
ಬೆಂಗಳೂರು ಮೈಸೂರು ದಶಪಥ ಒಂದು ಮಳೆಗೆ ಏಕಪಥ ರಸ್ತೆಯಾಗಿದೆ. ಇನ್ನೆರಡು ಬೋಟ್ ಪಥವಾಗಿ ಮಾರ್ಪಟ್ಟಿವೆ.
ಮೋದಿಯವರ ಮೇಲುಸ್ತುವಾರಿಯಲ್ಲಿ ಸಂಸದ @mepratap ಅವರು ಖುದ್ದಾಗಿ ಆಸಕ್ತಿ ವಹಿಸಿ ಬಹಳ ಮುಂದಾಲೋಚನೆಯಿಂದ ಈ ಜಲಸಾರಿಗೆ ಮಾರ್ಗಗಳನ್ನೂ ನಿರ್ಮಿಸಿದ್ದಾರೆ. ಶೀಘ್ರದಲ್ಲಿಯೇ ಪ್ರಧಾನಿ ಮೋದಿಯವರು ಬೋಟ್ ಪ್ರಯಾಣ ಮಾಡಿ ಉದ್ಘಾಟಿಸಲಿದ್ದಾರೆ. pic.twitter.com/lVYgOtb3FL
— Karnataka Congress (@INCKarnataka) March 18, 2023
‘ದಶಪಥ ಯೋಜನೆಯು ಮೋದಿಯವರ ಮೇಲುಸ್ತುವಾರಿಯಲ್ಲಿ ಹಾಗೂ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರು ಖುದ್ದಾಗಿ ಆಸಕ್ತಿ ವಹಿಸಿ ಕಾರ್ಯನಿರ್ವಹಿಸಿದ ಅಭಿವೃದ್ಧಿ ಯೋಜನೆ ಇದಾಗಿದೆ.
ಇವನ್ನೂ ಓದಿ: ಬೆಂಗಳೂರು-ಮೈಸೂರು ಹೆದ್ದಾರಿ ಜಲಾವೃತ; ಪ್ರಯಾಣಿಕರ ಜೀವ ಪಣಕ್ಕಿಟ್ಟ ಬಿಜೆಪಿ:ಡಿಕೆಶಿ
ಮಳೆ: ಮೈಸೂರು ಬೆಂಗಳೂರು ಹೆದ್ದಾರಿಯ ಬಸವನಪುರ ಅಂಡರ್ ಪಾಸ್ನಲ್ಲಿ ನಿಂತ ನೀರು
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.