ಬೆಂಗಳೂರು: ಬೆಂಗಳೂರು– ಮೈಸೂರು ದಶಪಥ ಹೆದ್ದಾರಿ ಯೋಜನೆಯು ಇದೀಗ, ಒಂದೇ ಮಳೆಗೆ ಏಕಪಥ ರಸ್ತೆಯಾಗಿದೆ. ಇನ್ನೆರಡು ಬೋಟ್ ಪಥವಾಗಿ ಮಾರ್ಪಟ್ಟಿವೆ ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ.
ಬೆಂಗಳೂರು– ಮೈಸೂರು ದಶಪಥ ಹೆದ್ದಾರಿ ವಿಚಾರ ಪ್ರಸ್ತಾಪಿಸಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಬಿಜೆಪಿ ಸರ್ಕಾರದವರ ಮುಂದಾಲೋಚನೆಯಿಂದ ಈ ಜಲಸಾರಿಗೆ ಮಾರ್ಗಗಳನ್ನೂ ನಿರ್ಮಿಸಿದ್ದಾರೆ. ಶೀಘ್ರದಲ್ಲಿಯೇ ಪ್ರಧಾನಿ ನರೇಂದ್ರ ಮೋದಿಯವರು ಬೋಟ್ ಪ್ರಯಾಣ ಮಾಡಿ ಉದ್ಘಾಟಿಸಲಿದ್ದಾರೆ ಎಂದು ಟೀಕಿಸಿದೆ.
ಬೆಂಗಳೂರು ಮೈಸೂರು ದಶಪಥ ಒಂದು ಮಳೆಗೆ ಏಕಪಥ ರಸ್ತೆಯಾಗಿದೆ. ಇನ್ನೆರಡು ಬೋಟ್ ಪಥವಾಗಿ ಮಾರ್ಪಟ್ಟಿವೆ.
ಮೋದಿಯವರ ಮೇಲುಸ್ತುವಾರಿಯಲ್ಲಿ ಸಂಸದ @mepratap ಅವರು ಖುದ್ದಾಗಿ ಆಸಕ್ತಿ ವಹಿಸಿ ಬಹಳ ಮುಂದಾಲೋಚನೆಯಿಂದ ಈ ಜಲಸಾರಿಗೆ ಮಾರ್ಗಗಳನ್ನೂ ನಿರ್ಮಿಸಿದ್ದಾರೆ. ಶೀಘ್ರದಲ್ಲಿಯೇ ಪ್ರಧಾನಿ ಮೋದಿಯವರು ಬೋಟ್ ಪ್ರಯಾಣ ಮಾಡಿ ಉದ್ಘಾಟಿಸಲಿದ್ದಾರೆ. pic.twitter.com/lVYgOtb3FL