ಬೆಂಗಳೂರು: ಅನೈತಿಕ ಪೊಲೀಸ್ಗಿರಿಯನ್ನು ಸಮರ್ಥಿಸಿಕೊಂಡಿರುವ ಮುಖ್ಯಮಂತ್ರಿ ಅವರು ತಾಲಿಬಾನ್ ಸಂಘಟನೆಯ ನಾಯಕರಂತೆ ಮಾತನಾಡಿದ್ದಾರೆ ಎಂದು ಕಾಂಗ್ರೆಸ್ ಟೀಕಿಸಿದೆ.
ಈ ಕುರಿತು ಗುರುವಾರ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್ ಪಕ್ಷವು, 'ಬಿಜೆಪಿಯ ಆಡಳಿತಕ್ಕೆ ಸಾಮಾಜಿಕ ಭಾವನೆಗಳೇ ಆಧಾರ ಎಂದಾದರೆ ದೇವದಾಸಿ ಪದ್ಧತಿ, ಅಸ್ಪೃಶ್ಯತೆಯ ಆಚರಣೆ, ಬೆತ್ತಲೆ ಸೇವೆಯಂತಹ ಸಾಮಾಜಿಕ ಆಚರಣೆಗಳ ಹಿಂದಿದ್ದ 'ಭಾವನೆ'ಗಳನ್ನು ಪುರಸ್ಕರಿಸಲಾಗುತ್ತದೆಯೇ?' ಎಂದು ಪ್ರಶ್ನಿಸಿದೆ.
'ಅನೈತಿಕ ಪೊಲೀಸ್ಗಿರಿ ಹೆಸರಲ್ಲಿ ನಡೆಯುತ್ತಿರುವ ಭಯೋತ್ಪಾದಕ ಕೃತ್ಯಗಳಿಗೆ ಸಂಬಂಧಿಸಿ ಬೊಮ್ಮಾಯಿ ಅವರ ಕುಮ್ಮಕ್ಕಿನ ಹೇಳಿಕೆಯಿಂದ ಸಮಾಜಘಾತುಕ ಶಕ್ತಿಗಳಿಗೆ ಬಲ ಬಂದಿದೆ' ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
'ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ತಡೆಯುವ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಕೆಲಸಗಳು ಈ ಸರ್ಕಾರದಿಂದ ಸಾಧ್ಯವಿಲ್ಲ ಎಂದು ನಿಶ್ಚಿತವಾಯ್ತು' ಎಂದು ಕೆಪಿಸಿಸಿ ತಿಳಿಸಿದೆ.
ಅನೈತಿಕ ಪೊಲೀಸ್ಗಿರಿಯನ್ನು ಸಮರ್ಥಿಸಿದ ಮುಖ್ಯಮಂತ್ರಿ @BSBommai ಅವರು ತಾಲಿಬಾನ್ ಸಂಘಟನೆಯ ನಾಯಕರಂತೆ ಮಾತಾಡಿದ್ದಾರೆ.
ಬಿಜೆಪಿಯ ಆಡಳಿತಕ್ಕೆ ಸಾಮಾಜಿಕ ಭಾವನೆಗಳೇ ಆಧಾರ ಎಂದಾದರೆ ದೇವದಾಸಿ ಪದ್ಧತಿ, ಅಸ್ಪೃಶ್ಯತೆಯ ಆಚರಣೆ, ಬೆತ್ತಲೆ ಸೇವೆಯಂತಹ ಸಾಮಾಜಿಕ ಆಚರಣೆಗಳ ಹಿಂದಿದ್ದ 'ಭಾವನೆ'ಗಳನ್ನು ಪುರಸ್ಕರಿಸಲಾಗುತ್ತದೆಯೇ?#ತಾಲಿಬಾನಿಬಿಜೆಪಿ