ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಪಿಎಫ್ಐ ನಿಷೇಧಿಸಿದ್ದು ಇಷ್ಟವಿದ್ದಂತೆ ಕಾಣುತ್ತಿಲ್ಲ. ಅವರಿಗೆ ದೇಶದ ಹಿತಕ್ಕಿಂತ ವೋಟ್ಗಳ ಹಿತದೃಷ್ಟಿ ಮುಖ್ಯವಾಗಿದೆ. ಮುಂದೆ ಚುನಾವಣೆ ಬರಲಿದ್ದು, ವೋಟ್ ಬ್ಯಾಂಕ್ಗೆ ಹಾನಿಯಾಗದಂತೆ ನೋಡಿಕೊಂಡು ಮಾತನಾಡುತ್ತಿದ್ದಾರೆ. ಪಿಎಫ್ಐ ನಿಷೇಧಿಸುವ ಬದಲು ಆರ್ಎಸ್ಎಸ್ ಯಾಕೆ ನಿಷೇಧ ಮಾಡಿಲ್ಲ ಎನ್ನುವ ರೀತಿಯಲ್ಲಿ ಹೇಳಿಕೆ ಕೊಡುತ್ತಿದ್ದಾರೆ ಎಂದು ಹೇಳಿದರು.