‘ನಮ್ಮ ಪಕ್ಷದ ನಾಯಕರ ಬಗ್ಗೆ ಟೀಕೆ ಮಾಡುವ ಸಂದರ್ಭ ತಾವು ಬಳಸುತ್ತಿರುವ ಭಾಷೆ ನಿಮ್ಮ ರಾಜಕೀಯ ಅಸಹನೆ, ದರ್ಪ, ದುರಹಂಕಾರಕ್ಕೆ ಸಾಕ್ಷಿಯಾಗಿದೆ. ಕ್ಷುಲ್ಲಕವಾಗಿ ವರ್ತಿಸುವುದರ ಬದಲು ಪ್ರಬುದ್ಧ ವಿರೋಧ ಪಕ್ಷದ ನಾಯಕನಾಗಿ ಕಾರ್ಯ ನಿರ್ವಹಿಸಬೇಕು. ಆಗ ಆ ಸ್ಥಾನಕ್ಕೂ ಶೋಭೆ ಬರುತ್ತದೆ’ ಎಂದು ಕಾರ್ಣಿಕ್ ತಿಳಿಸಿದ್ದಾರೆ.