ಮಹಿಳಾ ಹೋರಾಟಗಾರ್ತಿ ಕೆ.ಎಸ್.ವಿಮಲಾ, ‘ಆಡುಮುಟ್ಟದ ಸೊಪ್ಪಿಲ್ಲ ಎನ್ನುವಂತೆ ವಿಠಲ ಭಂಡಾರಿ ಅವರು ಎಲ್ಲ ವಿಚಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಈಗಿನ ವ್ಯವಸ್ಥೆ ಯುವಜನರ ದಿಕ್ಕು ತಪ್ಪಿಸುತ್ತಿದೆ. ಅವರಿಗೆ ಸಂವಿಧಾನ ಜ್ಞಾನದ ಅಗತ್ಯವಿದೆ ಎಂದು ಹೇಳುತ್ತಿದ್ದರು. ಕೊರೊನಾ ಸೋಂಕಿನ ಪರಿಸ್ಥಿತಿಯಲ್ಲೂ ಅವರ ಚಿಂತನೆಗಳಿಗೆ ಜೀವ ತುಂಬಲು ಹೋಗಿದ್ದರು. ಆದರೆ, ಕೊರೊನಾ ಅವರನ್ನು ಬಿಡಲಿಲ್ಲ’ ಎಂದು ಭಾವುಕರಾದರು.