ಅಪೌಷ್ಟಿಕತೆ, ರಕ್ತಹೀನತೆ ಹೊಂದಿರುವ ಶಾಲಾ ಮಕ್ಕಳ ಶೇಕಡಾವಾರು ಪ್ರಮಾಣ ಯಾದಗಿರಿಯಲ್ಲಿ ಅತೀ ಹೆಚ್ಚು ಶೇ 74ರಷ್ಟಿದೆ. ಉಳಿದಂತೆ, ಕಲಬುರಗಿಯಲ್ಲಿ ಶೇ 72.4, ಬಳ್ಳಾರಿ ಶೇ 72.3, ಕೊಪ್ಪಳ ಶೇ 70.7, ರಾಯಚೂರು ಶೇ 70.6, ಬೀದರ್ ಶೇ 69.1, ವಿಜಯಪುರ ಶೇ 68ರಷ್ಟಿದೆ. 6ರಿಂದ 15ರವರೆಗಿನ ವಯೋಮಾನದವರೆಗಿನ ಶಾಲಾ ಮಕ್ಕಳಲ್ಲಿ ಅಪೌಷ್ಟಿಕತೆ, ರಕ್ತ ಹೀನತೆ ಹಾಗೂ ಪೋಷಕಾಂಶಗಳ ಕೊರತೆ ನಿವಾರಿಸುವ ಉದ್ದೇಶದಿಂದ ‘ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್’ ಯೋಜನೆಯಲ್ಲಿ ಈ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತಿದೆ.