ನಾರಾಯಣ ಆಚಾರ್ ಅವರ ಮೃತದೇಹ ಪತ್ತೆಯಾದ ಬಳಿಕ ಸಚಿವ ವಿ.ಸೋಮಣ್ಣ ಅವರು ಇಬ್ಬರು ಪುತ್ರಿಯರಿಗೆ ತಲಾ ₹ 2.5 ಲಕ್ಷದಂತೆ ಪರಿಹಾರ ಚೆಕ್ ವಿತರಿಸಿದ್ದರು. ಭಾಗಮಂಡಲ ಪೊಲೀಸ್ ಠಾಣೆಗೆ ಶಾರದಾ ಆಚಾರ್, ನಮಿತಾ ಆಚಾರ್ ಎಂಬ ಹೆಸರಿನಲ್ಲಿ ಪುತ್ರಿಯರು ನಾಪತ್ತೆಯ ದೂರು ಸಲ್ಲಿಸಿದ್ದರಿಂದ ತಹಶೀಲ್ದಾರ್ ಕಚೇರಿಯಿಂದ ಆ ಹೆಸರಿಗೆ ಚೆಕ್ ಬರೆಯಲಾಗಿತ್ತು. ಆದರೆ, ಈ ಹೆಸರಿನಲ್ಲಿ ಹಣ ಡ್ರಾ ಮಾಡಲು ಸಾಧ್ಯವಿಲ್ಲ. ಹೆಸರು ಬದಲಾಗಿದ್ದು, ಶೆನೋನ್ ಫರ್ನಾಂಡಿಸ್, ನಮಿತಾ ನಝರತ್ ಎಂಬ ಹೆಸರಿನಲ್ಲಿ ಚೆಕ್ ಬರೆಯಲು ಕೋರಿದ್ದರು. ಚೆಕ್ ಅನ್ನು ಭಾಗಮಂಡಲ ನಾಡಕಚೇರಿಗೆ ವಾಪಸ್ ನೀಡಿದ್ದರು.