‘ಕಾಲ ಬದಲಾದಂತೆ ಹಲವು ಕಾನೂನುಗಳು ಅಪ್ರಸ್ತುತವಾಗಿವೆ. ಇಂತಹ ಕಾನೂನುಗಳನ್ನು ಗುರುತಿಸಿ ಬದಲಾವಣೆ ತರುವ ಅಗತ್ಯವಿದೆ. ಕ್ಲಿಷ್ಟಕರ ವ್ಯವಸ್ಥೆಯ ನಡುವೆ ನ್ಯಾಯಾಂಗದ ಮೇಲೆ ಜನರಿಗೆ ನಂಬಿಕೆ ಇದೆ. ಈ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ಕಾನೂನುಗಳಲ್ಲಿ ಬದಲಾವಣೆ ಆಗಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರ ಪ್ರಯತ್ನಿಸಲಿದೆ’ ಎಂದರು.