<p><strong>ಬೆಂಗಳೂರು:</strong> ಎಂಜಿನಿಯರಿಂಗ್ ಕಾಲೇಜುಗಳ ಪ್ರವೇಶಕ್ಕೆ ಕಾಮೆಡ್-ಕೆ ನಡೆಸಿದ ಪರೀಕ್ಷೆಯ ಫಲಿತಾಂಶ ಭಾನುವಾರ (ಸೆ. 26) ಪ್ರಕಟಗೊಂಡಿದ್ದು, ಬೆಂಗಳೂರಿನ ವೀರೇಶ್ ಬಿ. ಪಾಟೀಲ್ ಮೊದಲ ಸ್ಥಾನ ಪಡೆದಿದ್ದಾರೆ.</p>.<p>ಮೊದಲ 10 ಸ್ಥಾನಗಳ ಪೈಕಿ ಐವರು ಕರ್ನಾಟಕದ ವಿದ್ಯಾರ್ಥಿಗಳು. ಅಲ್ಲದೆ, ಮೊದಲ 100 ಸ್ಥಾನಗಳ<br />ಪೈಕಿ 44 ಸ್ಥಾನಗಳು ರಾಜ್ಯದ ವಿದ್ಯಾರ್ಥಿಗಳ ಪಾಲಾಗಿವೆ.</p>.<p>ಪರೀಕ್ಷೆಗೆ ಹಾಜರಾದ ಒಟ್ಟು ವಿದ್ಯಾರ್ಥಿಗಳ ಪೈಕಿ 4,660 ವಿದ್ಯಾರ್ಥಿಗಳು ಶೇ 90 ರಿಂದ ಶೇ 100 ರಷ್ಟು ಅಂಕ ಗಳಿಸಿದ್ದಾರೆ. 4,343 ವಿದ್ಯಾರ್ಥಿಗಳು ಶೇ 80 ರಿಂದ ಶೇ 90ರಷ್ಟು ಅಂಕ ಗಳಿಸಿದ್ದಾರೆ.</p>.<p>ದೇಶದಾದ್ಯಂತ 66,304 ವಿದ್ಯಾರ್ಥಿಗಳು ಕಾಮೆಡ್-ಕೆ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಈ ಪೈಕಿ, 44,111 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅವರಲ್ಲಿ ಕರ್ನಾಟಕದ 16,632 ವಿದ್ಯಾರ್ಥಿಗಳು ಮತ್ತು ಹೊರ ರಾಜ್ಯಗಳಿಂದ 27,479 ವಿದ್ಯಾರ್ಥಿಗಳು ಇದ್ದರು.</p>.<p>‘ಕಳೆದ ವರ್ಷದಂತೆ ಈ ಬಾರಿ ಕೂಡಾ ಆನ್ಲೈನ್ ಮೂಲಕ ಕೌನ್ಸೆಲಿಂಗ್ ನಡೆಸಿ ಎಂಜಿನಿಯರಿಂಗ್ ಸೀಟು<br />ಗಳಿಗೆ ಪ್ರವೇಶ ನೀಡಲಾಗುವುದು. ವಿದ್ಯಾರ್ಥಿಗಳು ಎಲ್ಲ ದಾಖಲೆಗಳನ್ನು ಆನ್ಲೈನ್ ಮೂಲಕ ಸಲ್ಲಿಸಬೇಕು. ತಜ್ಞರ<br />ಸಮಿತಿ ವಿದ್ಯಾರ್ಥಿಗಳ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಮುಂದಿನ ಪ್ರಕ್ರಿಯೆ ಯನ್ನು ಪ್ರಕಟಿಸಲಾಗುವುದು’ ಎಂದು ಕಾಮೆಡ್-ಕೆ ಕಾರ್ಯನಿರ್ವಾಹಕ ಕಾರ್ಯದರ್ಶಿ ಎಸ್. ಕುಮಾರ್ ತಿಳಿಸಿದ್ದಾರೆ.</p>.<p>ಮೇ ತಿಂಗಳಲ್ಲಿ ನಡೆಯಬೇಕಾಗಿದ್ದ ಕಾಮೆಡ್-ಕೆ ಪರೀಕ್ಷೆಯನ್ನು ಕೋವಿಡ್ ಎರಡನೇ ಅಲೆ, ಲಾಕ್ಡೌನ್ ಕಾರಣಗಳಿಗೆ ಮೂರು ಬಾರಿ ಮುಂದೂಡಲಾಗಿತ್ತು. ಅಂತಿಮವಾಗಿ ಸೆ. 14ರಂದು ಪರೀಕ್ಷೆ ನಡೆಸಲಾಗಿತ್ತು.</p>.<p>ದೇಶದಾದ್ಯಂತ 157 ನಗರಗಳಲ್ಲಿ 224 ಕೇಂದ್ರಗಳಲ್ಲಿ ಆನ್ಲೈನ್ ಮೂಲಕ ಪರೀಕ್ಷೆ ನಡೆದಿತ್ತು. 180 ಕ್ಕೂ ಹೆಚ್ಚಿನ ಶಿಕ್ಷಣ ಸಂಸ್ಥೆಗಳು ಮತ್ತು 30ಕ್ಕೂ ಅಧಿಕ ಖಾಸಗಿ ವಿಶ್ವವಿದ್ಯಾಲಯಗಳು ಎಂಜಿನಿಯರಿಂಗ್ ಪ್ರವೇಶಕ್ಕೆ ಕಾಮೆಡ್-ಕೆ ಪರೀಕ್ಷಾ ಫಲಿತಾಂಶ ಪರಿಗಣಿಸುತ್ತವೆ.</p>.<p><strong>ಮೊದಲ ಹತ್ತು ಸ್ಥಾನ ಪಡೆದ ವಿದ್ಯಾರ್ಥಿಗಳು</strong></p>.<p>l ವೀರೇಶ್ ಬಿ. ಪಾಟೀಲ್- ಬೆಂಗಳೂರು</p>.<p>l ಆರ್. ಶಿವ ಸುಧಾನ್ – ಬೆಂಗಳೂರು</p>.<p>l ಗೌರವ್ ಕಟಾರಿಯಾ- ರಾಜಸ್ಥಾನ</p>.<p>l ಕಟಿಕೇಲ ಪುನೀತ್ ಕುಮಾರ್- ಆಂಧ್ರಪ್ರದೇಶ</p>.<p>l ರಿಶಿತ್ ಶ್ರೀವಾಸ್ತವ- ರಾಜಸ್ಥಾನ</p>.<p>l ಭಾವೇಶ್ ಗುರ್ನಾನಿ- ರಾಜಸ್ಥಾನ</p>.<p>l ಎ.ಶ್ರೀಕರ- ಬೆಂಗಳೂರು</p>.<p>l ಪಿ. ನಿಶ್ಚಿತ್- ಮೈಸೂರು</p>.<p>l ದೀಪಕ್ ಚೌಧರಿ- ಉತ್ತರ ಪ್ರದೇಶ</p>.<p>l ಎಂ. ಶ್ರೀಹರ್ಷ ಭಟ್- ಬಳ್ಳಾರಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಎಂಜಿನಿಯರಿಂಗ್ ಕಾಲೇಜುಗಳ ಪ್ರವೇಶಕ್ಕೆ ಕಾಮೆಡ್-ಕೆ ನಡೆಸಿದ ಪರೀಕ್ಷೆಯ ಫಲಿತಾಂಶ ಭಾನುವಾರ (ಸೆ. 26) ಪ್ರಕಟಗೊಂಡಿದ್ದು, ಬೆಂಗಳೂರಿನ ವೀರೇಶ್ ಬಿ. ಪಾಟೀಲ್ ಮೊದಲ ಸ್ಥಾನ ಪಡೆದಿದ್ದಾರೆ.</p>.<p>ಮೊದಲ 10 ಸ್ಥಾನಗಳ ಪೈಕಿ ಐವರು ಕರ್ನಾಟಕದ ವಿದ್ಯಾರ್ಥಿಗಳು. ಅಲ್ಲದೆ, ಮೊದಲ 100 ಸ್ಥಾನಗಳ<br />ಪೈಕಿ 44 ಸ್ಥಾನಗಳು ರಾಜ್ಯದ ವಿದ್ಯಾರ್ಥಿಗಳ ಪಾಲಾಗಿವೆ.</p>.<p>ಪರೀಕ್ಷೆಗೆ ಹಾಜರಾದ ಒಟ್ಟು ವಿದ್ಯಾರ್ಥಿಗಳ ಪೈಕಿ 4,660 ವಿದ್ಯಾರ್ಥಿಗಳು ಶೇ 90 ರಿಂದ ಶೇ 100 ರಷ್ಟು ಅಂಕ ಗಳಿಸಿದ್ದಾರೆ. 4,343 ವಿದ್ಯಾರ್ಥಿಗಳು ಶೇ 80 ರಿಂದ ಶೇ 90ರಷ್ಟು ಅಂಕ ಗಳಿಸಿದ್ದಾರೆ.</p>.<p>ದೇಶದಾದ್ಯಂತ 66,304 ವಿದ್ಯಾರ್ಥಿಗಳು ಕಾಮೆಡ್-ಕೆ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಈ ಪೈಕಿ, 44,111 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅವರಲ್ಲಿ ಕರ್ನಾಟಕದ 16,632 ವಿದ್ಯಾರ್ಥಿಗಳು ಮತ್ತು ಹೊರ ರಾಜ್ಯಗಳಿಂದ 27,479 ವಿದ್ಯಾರ್ಥಿಗಳು ಇದ್ದರು.</p>.<p>‘ಕಳೆದ ವರ್ಷದಂತೆ ಈ ಬಾರಿ ಕೂಡಾ ಆನ್ಲೈನ್ ಮೂಲಕ ಕೌನ್ಸೆಲಿಂಗ್ ನಡೆಸಿ ಎಂಜಿನಿಯರಿಂಗ್ ಸೀಟು<br />ಗಳಿಗೆ ಪ್ರವೇಶ ನೀಡಲಾಗುವುದು. ವಿದ್ಯಾರ್ಥಿಗಳು ಎಲ್ಲ ದಾಖಲೆಗಳನ್ನು ಆನ್ಲೈನ್ ಮೂಲಕ ಸಲ್ಲಿಸಬೇಕು. ತಜ್ಞರ<br />ಸಮಿತಿ ವಿದ್ಯಾರ್ಥಿಗಳ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಮುಂದಿನ ಪ್ರಕ್ರಿಯೆ ಯನ್ನು ಪ್ರಕಟಿಸಲಾಗುವುದು’ ಎಂದು ಕಾಮೆಡ್-ಕೆ ಕಾರ್ಯನಿರ್ವಾಹಕ ಕಾರ್ಯದರ್ಶಿ ಎಸ್. ಕುಮಾರ್ ತಿಳಿಸಿದ್ದಾರೆ.</p>.<p>ಮೇ ತಿಂಗಳಲ್ಲಿ ನಡೆಯಬೇಕಾಗಿದ್ದ ಕಾಮೆಡ್-ಕೆ ಪರೀಕ್ಷೆಯನ್ನು ಕೋವಿಡ್ ಎರಡನೇ ಅಲೆ, ಲಾಕ್ಡೌನ್ ಕಾರಣಗಳಿಗೆ ಮೂರು ಬಾರಿ ಮುಂದೂಡಲಾಗಿತ್ತು. ಅಂತಿಮವಾಗಿ ಸೆ. 14ರಂದು ಪರೀಕ್ಷೆ ನಡೆಸಲಾಗಿತ್ತು.</p>.<p>ದೇಶದಾದ್ಯಂತ 157 ನಗರಗಳಲ್ಲಿ 224 ಕೇಂದ್ರಗಳಲ್ಲಿ ಆನ್ಲೈನ್ ಮೂಲಕ ಪರೀಕ್ಷೆ ನಡೆದಿತ್ತು. 180 ಕ್ಕೂ ಹೆಚ್ಚಿನ ಶಿಕ್ಷಣ ಸಂಸ್ಥೆಗಳು ಮತ್ತು 30ಕ್ಕೂ ಅಧಿಕ ಖಾಸಗಿ ವಿಶ್ವವಿದ್ಯಾಲಯಗಳು ಎಂಜಿನಿಯರಿಂಗ್ ಪ್ರವೇಶಕ್ಕೆ ಕಾಮೆಡ್-ಕೆ ಪರೀಕ್ಷಾ ಫಲಿತಾಂಶ ಪರಿಗಣಿಸುತ್ತವೆ.</p>.<p><strong>ಮೊದಲ ಹತ್ತು ಸ್ಥಾನ ಪಡೆದ ವಿದ್ಯಾರ್ಥಿಗಳು</strong></p>.<p>l ವೀರೇಶ್ ಬಿ. ಪಾಟೀಲ್- ಬೆಂಗಳೂರು</p>.<p>l ಆರ್. ಶಿವ ಸುಧಾನ್ – ಬೆಂಗಳೂರು</p>.<p>l ಗೌರವ್ ಕಟಾರಿಯಾ- ರಾಜಸ್ಥಾನ</p>.<p>l ಕಟಿಕೇಲ ಪುನೀತ್ ಕುಮಾರ್- ಆಂಧ್ರಪ್ರದೇಶ</p>.<p>l ರಿಶಿತ್ ಶ್ರೀವಾಸ್ತವ- ರಾಜಸ್ಥಾನ</p>.<p>l ಭಾವೇಶ್ ಗುರ್ನಾನಿ- ರಾಜಸ್ಥಾನ</p>.<p>l ಎ.ಶ್ರೀಕರ- ಬೆಂಗಳೂರು</p>.<p>l ಪಿ. ನಿಶ್ಚಿತ್- ಮೈಸೂರು</p>.<p>l ದೀಪಕ್ ಚೌಧರಿ- ಉತ್ತರ ಪ್ರದೇಶ</p>.<p>l ಎಂ. ಶ್ರೀಹರ್ಷ ಭಟ್- ಬಳ್ಳಾರಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>