ಮನುಷ್ಯರ ಮೌಲ್ಯಗಳೂ ತಂತ್ರಜ್ಞಾನದಿಂದಲೇ ನಿರ್ದೇಶಿತವಾಗುತ್ತಿವೆ. ವಿಜ್ಞಾನ, ತಂತ್ರಜ್ಞಾನದ ಜತೆಗೆ ನೈತಿಕ ಮೌಲ್ಯಗಳು ಬೆರೆತಾಗ ಸನ್ಮಾರ್ಗದ ಉನ್ನತಿ ಸಾಧ್ಯವಾಗುತ್ತದೆ. ಹಾಗಾಗಿ, ಶಿಕ್ಷಕರು ಜೀವನಕ್ಕೆ ಹತ್ತಿರವಾದ ಬೋಧನೆಯಲ್ಲಿ ತಮ್ಮನ್ನು ತೊಡಗಿಸಿ ಕೊಳ್ಳಬೇಕು. ಬೋಧನೆಯನ್ನು ಬದುಕಿನ ಜತೆ ಬೆಸೆಯಬೇಕು. ಚಿಂತನಾ ಪ್ರಕ್ರಿಯೆಗೆ ಶಿಸ್ತು, ಮಕ್ಕಳ ಮುಗ್ಧತೆ ಮತ್ತು ಕುತೂ ಹಲ ಉಳಿಸಿಕೊಳ್ಳುವುದೇ ಈಗಿರುವ ಸವಾಲು ಎಂದು ಪ್ರತಿಪಾದಿಸಿದರು.