ಮುಸ್ಲಿಂ ಸಮುದಾಯದ ನಾಯಕನಾಗಿ ಗುರುತಿಸಿಕೊಳ್ಳುವ ಪ್ರಯತ್ನದಲ್ಲಿರುವ ಪಕ್ಷದ ಶಾಸಕ ಜಮೀರ್ ಅಹ್ಮದ್ ಖಾನ್ ಮಾತನ್ನು ಸಿದ್ದರಾಮಯ್ಯ ಕೇಳುತ್ತಿದ್ದಾರೆ ಎಂಬುವುದು ಕೆಲವರ ಆರೋಪ. ಜೆಡಿಎಸ್ ತ್ಯಜಿಸಿ ಕಾಂಗ್ರೆಸ್ಗೆ ಸೇರಿದ್ದ ಜಮೀರ್, ಸಿದ್ದರಾಮಯ್ಯ ಆಪ್ತ ಬಳಗ ಸೇರಿಕೊಂಡ ಬಳಿಕ ರೋಷನ್ ಬೇಗ್, ಸಿ.ಎಂ. ಇಬ್ರಾಹಿಂ ಸೇರಿದಂತೆ ಹಳೇ ಸ್ನೇಹಿತರು ದೂರವಾದರು ಎಂಬ ಮಾತುಗಳು ಕಾಂಗ್ರೆಸ್ನಲ್ಲಿದೆ. ಇತ್ತೀಚೆಗೆ ಸಿದ್ದರಾಮಯ್ಯ ದೆಹಲಿ ಪ್ರವಾಸದ ಸಂದರ್ಭದಲ್ಲಿಯೂ ಜಮೀರ್ ಜತೆಗಿದ್ದರು.