ಬೆಂಗಳೂರು: ರಾಜ್ಯದಲ್ಲಿ ನಾಲ್ಕು ತಿಂಗಳ ನಂತರ ಇದೇ ಮೊದಲ ಬಾರಿಗೆ ಎರಡು ಸಾವಿರಕ್ಕಿಂತ ಕಡಿಮೆ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಾವು ಕೂಡ 20ರೊಳಗೆ ದಾಖಲಾಗಿದೆ.
ಜುಲೈ 7 ರಂದು ರಾಜ್ಯದಲ್ಲಿ 1,493 ಸೋಂಕು ಪ್ರಕರಣಗಳು ವರದಿಯಾಗಿದ್ದವು. ಆ ನಂತರ ಏರಿಕೆ ಹಾದಿ ಹಿಡಿದಿತ್ತು.
1,963 ಮಂದಿಗೆ ಸೋಂಕು ತಗುಲಿರುವುದು ಸೋಮವಾರ ದೃಢಪಟ್ಟಿದೆ. ಚಿಕಿತ್ಸೆ ಪಡೆಯುತ್ತಿದ್ದವರ ಪೈಕಿ 2,686 ಮಂದಿ ಗುಣಮುಖರಾಗಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೇ 19 ಸೋಂಕಿತರು ಮೃತಪಟ್ಟಿದ್ದಾರೆ.
ಬೆಂಗಳೂರು (978) ಹೊರತು ಪಡಿಸಿದರೆ ರಾಜ್ಯದ ಯಾವ ಜಿಲ್ಲೆಗಳಲ್ಲಿಯೂ ಹೊಸ ಪ್ರಕರಣಗಳು ನೂರರ ಗಡಿದಾಟಿಲ್ಲ. ಐದು ಜಿಲ್ಲೆಗಳಲ್ಲಿ ಬೆರಳೆಣಿಕೆ ಮಂದಿಗೆ ಸೋಂಕು ತಗುಲಿದ್ದು, 19 ಜಿಲ್ಲೆಗಳಲ್ಲಿ ಸೋಂಕಿತರ ಸಾವು ವರದಿಯಾಗಿಲ್ಲ.
ಒಟ್ಟಾರೆ ಸೋಂಕು ಪ್ರಕರಣಗಳ ಸಂಖ್ಯೆ 8.48 ಲಕ್ಷಕ್ಕೆ ತಲುಪಿದ್ದು, ಈ ಪೈಕಿ 8.04 ಲಕ್ಷ ಪ್ರಕರಣಗಳಲ್ಲಿ ಸೋಂಕಿತರು ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಗುಣಮುಖ ದರ ಶೇ. 94.7ಕ್ಕೆ ಹೆಚ್ಚಳವಾಗಿದೆ. ಈವರೆಗೂ 11,410 ಸೋಂಕಿತರ ಸಾವಾಗಿದ್ದು, ಮರಣ ದರ ಶೇ.1.3 ರಷ್ಟಿದೆ. ಇಂದಿಗೂ 32,936 ಸಕ್ರಿಯ ಪ್ರಕರಣಗಳಲ್ಲಿ ಸೋಂಕಿತರು ಆಸ್ಪತ್ರೆ, ಮನೆಗಳಲ್ಲಿ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ.
ನಿತ್ಯ ಒಂದು ಲಕ್ಷ ಕೋವಿಡ್ ಪರೀಕ್ಷೆಗಳು ನಡೆಯುತ್ತಿದ್ದವು. ಇವುಗಳ ಸಂಖ್ಯೆ ಈಗ 84 ಸಾವಿರಕ್ಕೆ ಇಳಿಕೆಯಾಗಿರುವುದೂ ಪ್ರಕರಣಗಳ ಸಂಖ್ಯೆ ಕಡಿಮೆ ಯಾಗಲು ಕಾರಣ ಎನ್ನಲಾಗಿದೆ.
ಬಳ್ಳಾರಿ - 3, ಬೆಂಗಳೂರು ಗ್ರಾಮಾಂತರ- 1, ಬೆಂಗಳೂರು ನಗರ- 5, ಚಿಕ್ಕಬಳ್ಳಾಪುರ -1, ಚಿತ್ರದುರ್ಗ-1 ,ದಕ್ಷಿಣ ಕನ್ನಡ-2, ಧಾರವಾಡ-2, ಕೋಲಾರ-1, ಮಂಡ್ಯ -1 ,ರಾಯಚೂರು- 1. ತುಮಕೂರಿನಲ್ಲಿ ಒಬ್ಬರು ಮೃತಪಟ್ಟಿರುವುದು ವರದಿಯಾಗಿದೆ. ಈ ವರೆಗೆ ಸಾವಿಗೀಡಾದವರ ಸಂಖ್ಯೆ 11410.
876 ರೋಗಿಗಳು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕು ದೃಢಪಟ್ಟಿರುವ ಪ್ರಕರಣಗಳ ಶೇಕಡಾವಾರು ಪ್ರಮಾಣ 2.31 ಆಗಿದ್ದು,ಸೋಂಕಿನಿಂದ ಮೃತಪಟ್ಟವರ ಶೇಕಡಾವಾರು ಪ್ರಮಾಣ 0.95 ಆಗಿದೆ. ಕಳೆದ ಏಳು ದಿನಗಳಲ್ಲಿ ಹೋಂ ಕ್ವಾರಂಟೈನ್ನಲ್ಲಿರುವ ವ್ಯಕ್ತಿಗಳ ಸಂಖ್ಯೆ 43007 ಆಗಿದೆ.
Today's Media Bulletin 09/11/2020.
— K'taka Health Dept (@DHFWKA) November 9, 2020
Please click on the link below to view bulletin.@PMOIndia @narendramodi @CMofKarnataka @UNICEFIndia @UNDP_India @WHOSEARO @MoHFW_INDIA @drharshvardhan @BSYBJP @DVSadanandGowda @PCMohanMP @Tejasvi_Surya https://t.co/pJCVM7aD88 pic.twitter.com/lJPVBjvMhP
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.