<p><strong>ಬೆಂಗಳೂರು</strong>: ಕೋವಿಡ್ನಿಂದ ದೇಶದ ಜನರನ್ನು ರಕ್ಷಿಸಲಾಗದ ಸರ್ಕಾರದ ವೈಫಲ್ಯ ಲಕ್ಷಾಂತರ ಜನರ ದಾರುಣ ಸಾವಿಗೆ ಕಾರಣವಾಯಿತು ಎಂದು ಕರ್ನಾಟಕ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.</p>.<p>ಹೆಚ್ಚುತ್ತಿರುವ ಆತ್ಮಹತ್ಯೆಗಳ ಕುರಿತ ಪ್ರಜಾವಾಣಿ ವರದಿಯನ್ನು ಆಧರಿಸಿ ಟ್ವೀಟ್ ಮಾಡಿರುವ ಕೆಪಿಸಿಸಿ, 'ಅವೈಜ್ಞಾನಿಕ ಲಾಕ್ಡೌನ್, ಸಿಗದ ನಷ್ಟ ಪರಿಹಾರ, ಉದ್ಯೋಗ ನಷ್ಟ, ಬೆಲೆಏರಿಕೆ, ಆರ್ಥಿಕ ಸಂಕಷ್ಟದಿಂದ ಆಘಾತ, ಖಿನ್ನತೆಗೊಳಗಾದ ಜನ ಆತ್ಮಹತ್ಯೆಯ ದಾರಿ ಹಿಡಿದಿದ್ದಾರೆ. ಜನರ ಜೀವ, ಜೀವನದ ಕನಿಷ್ಟ ಕಾಳಜಿಯೂ ಈ ಬಿಜೆಪಿ ಸರ್ಕಾರಗಳಿಗಿಲ್ಲ' ಎಂದು ಟೀಕಿಸಿದೆ.</p>.<p>'ಲಾಕ್ಡೌನ್ ನಂತರದ ಬೆಲೆ ಏರಿಕೆಯಿಂದ ದೇಶದ ಆರ್ಥಿಕತೆ, ಜನರ ಬದುಕು ಮೂರಾಬಟ್ಟೆಯಾಗಿದ್ದು ಕಣ್ಣ ಮುಂದಿದೆ. ಹೀಗಿದ್ದೂ ಬಿಜೆಪಿಗರು ಬೆಲೆ ಏರಿಕೆಯಿಂದ ಜನತೆಗೆ ಸಮಸ್ಯೆ ಇಲ್ಲ ಎಂದು ಉಡಾಫೆ ಮಾತನಾಡುತ್ತಿರುವುದು ನಾಚಿಕೆಗೇಡು. ಬಡ ಬೀದಿ ವ್ಯಾಪಾರಿಗಳ, ಬಡ ಗ್ರಾಹಕರು ಮದ್ಯಮವರ್ಗದವರ ಈ ಬವಣೆಯೇ ದೇಶದ ಆರ್ಥಿಕ ದುರ್ಗತಿಗೆ ಹಿಡಿದ ಕನ್ನಡಿ' ಎಂದೂ ಕೆಪಿಸಿಸಿ ಟ್ವೀಟ್ ಮಾಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಕೋವಿಡ್ನಿಂದ ದೇಶದ ಜನರನ್ನು ರಕ್ಷಿಸಲಾಗದ ಸರ್ಕಾರದ ವೈಫಲ್ಯ ಲಕ್ಷಾಂತರ ಜನರ ದಾರುಣ ಸಾವಿಗೆ ಕಾರಣವಾಯಿತು ಎಂದು ಕರ್ನಾಟಕ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.</p>.<p>ಹೆಚ್ಚುತ್ತಿರುವ ಆತ್ಮಹತ್ಯೆಗಳ ಕುರಿತ ಪ್ರಜಾವಾಣಿ ವರದಿಯನ್ನು ಆಧರಿಸಿ ಟ್ವೀಟ್ ಮಾಡಿರುವ ಕೆಪಿಸಿಸಿ, 'ಅವೈಜ್ಞಾನಿಕ ಲಾಕ್ಡೌನ್, ಸಿಗದ ನಷ್ಟ ಪರಿಹಾರ, ಉದ್ಯೋಗ ನಷ್ಟ, ಬೆಲೆಏರಿಕೆ, ಆರ್ಥಿಕ ಸಂಕಷ್ಟದಿಂದ ಆಘಾತ, ಖಿನ್ನತೆಗೊಳಗಾದ ಜನ ಆತ್ಮಹತ್ಯೆಯ ದಾರಿ ಹಿಡಿದಿದ್ದಾರೆ. ಜನರ ಜೀವ, ಜೀವನದ ಕನಿಷ್ಟ ಕಾಳಜಿಯೂ ಈ ಬಿಜೆಪಿ ಸರ್ಕಾರಗಳಿಗಿಲ್ಲ' ಎಂದು ಟೀಕಿಸಿದೆ.</p>.<p>'ಲಾಕ್ಡೌನ್ ನಂತರದ ಬೆಲೆ ಏರಿಕೆಯಿಂದ ದೇಶದ ಆರ್ಥಿಕತೆ, ಜನರ ಬದುಕು ಮೂರಾಬಟ್ಟೆಯಾಗಿದ್ದು ಕಣ್ಣ ಮುಂದಿದೆ. ಹೀಗಿದ್ದೂ ಬಿಜೆಪಿಗರು ಬೆಲೆ ಏರಿಕೆಯಿಂದ ಜನತೆಗೆ ಸಮಸ್ಯೆ ಇಲ್ಲ ಎಂದು ಉಡಾಫೆ ಮಾತನಾಡುತ್ತಿರುವುದು ನಾಚಿಕೆಗೇಡು. ಬಡ ಬೀದಿ ವ್ಯಾಪಾರಿಗಳ, ಬಡ ಗ್ರಾಹಕರು ಮದ್ಯಮವರ್ಗದವರ ಈ ಬವಣೆಯೇ ದೇಶದ ಆರ್ಥಿಕ ದುರ್ಗತಿಗೆ ಹಿಡಿದ ಕನ್ನಡಿ' ಎಂದೂ ಕೆಪಿಸಿಸಿ ಟ್ವೀಟ್ ಮಾಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>