<p><strong>ಬೆಂಗಳೂರು: </strong>ರಾಜ್ಯ ಸರ್ಕಾರ 14 ದಿನಗಳ ಕಾಲ ರಾತ್ರಿ ಕರ್ಫ್ಯೂ ಮತ್ತು ವಾರಾಂತ್ಯದ ಬಂದ್ ಘೋಷಿಸಿದ್ದು, ಈ ಸಂದರ್ಭದಲ್ಲಿ ಹಲವು ಚಟುವಟಿಕೆಗಳನ್ನು ನಿರ್ಬಂಧಿಸಿ ಆದೇಶ ಹೊರಡಿಸಿದೆ.</p>.<p>ರಾತ್ರಿ ಕರ್ಫ್ಯೂ 9 ಗಂಟೆಯಿಂದ ಮಾರನೇ ದಿನ ಬೆಳಿಗ್ಗೆ 6 ಗಂಟೆಯವರೆಗೆ ಇರುತ್ತದೆ. ಈ ಸಂದರ್ಭದಲ್ಲಿ ಎಲ್ಲ ರೀತಿಯ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ. ಆಸ್ಪತ್ರೆಗೆ ಹೋಗುವವರು, ಅಗತ್ಯ ವಸ್ತುಗಳ ಸಾಗಣೆಗೆ ಅವಕಾಶವಿರುತ್ತದೆ. 14 ದಿನಗಳ ಕಾಲ ಬೆಳಿಗ್ಗೆ 6 ರಿಂದ ರಾತ್ರಿ 9 ರವರೆಗೆ ಹಲವು ಚಟುವಟಿಕೆಗಳ ಮೇಲೆ ನಿರ್ಬಂಧ ವಿಧಿಸಲಾಗಿದೆ. ಅವುಗಳ ವಿವರ ಈ ಕೆಳಗಿನಂತಿದೆ.</p>.<p class="Briefhead"><strong>ಏನೆಲ್ಲ ಇರುವುದಿಲ್ಲ</strong></p>.<p><span class="Bullet">l</span>ಶಾಲೆಗಳು, ಕಾಲೇಜುಗಳು, ಕೋಚಿಂಗ್ ಕೇಂದ್ರಗಳು. (ಆನ್ಲೈನ್, ದೂರಶಿಕ್ಷಣ ಮುಂದುವರೆಸಬಹುದು)</p>.<p><span class="Bullet">l</span>ಸಿನಿಮಾ ಹಾಲ್ಗಳು, ಶಾಪಿಂಗ್ ಮಾಲ್, ಜಿಮ್ನಾಷಿಯಂ, ಯೋಗ ಕೇಂದ್ರಗಳು, ಸ್ಪಾ, ಕ್ರೀಡಾ ಕಾಂಪ್ಲೆಕ್ಸ್ಗಳು, ಸ್ಟೇಡಿಯಂ, ಈಜುಕೊಳ, ಮನರಂಜನಾ ಅಮ್ಯೂಸ್ಮೆಂಟ್ ಪಾರ್ಕ್, ಬಾರ್, ಕ್ಲಬ್, ಆಡಿಟೋರಿಯಂಗಳು ಮತ್ತಿತರ ಸಮಾವೇಶದ ತಾಣಗಳು</p>.<p><span class="Bullet">l</span>ಎಲ್ಲ ರೀತಿಯ ಸಮಾವೇಶಗಳು, ಎಲ್ಲಾ ಧಾರ್ಮಿಕ ಸ್ಥಳಗಳು, ಪೂಜಾ, ಪ್ರಾರ್ಥನಾ ಮಂದಿರಗಳಿಗೆ ಭಕ್ತರಿಗೆ ಅವಕಾಶ ಇಲ್ಲ. ಆದರೆ, ಪೂಜಾ ಕೈಂಕರ್ಯ ನಡೆಸಲು ಅರ್ಚಕರಿಗೆ ಅವಕಾಶ ಇದೆ. ಆಯಾ ಧರ್ಮಗಳ ಧಾರ್ಮಿಕ ವಿಧಿ–ವಿಧಾನ ನಡೆಸಲು ಅವಕಾಶ ಇದೆ</p>.<p class="Briefhead"><strong>ಯಾವುದಕ್ಕೆಲ್ಲಾ ಅವಕಾಶ ಇದೆ</strong></p>.<p><span class="Bullet">l</span>ನೆರೆಹೊರೆಯ ಕಿರಾಣಿ ಅಂಗಡಿ, ನ್ಯಾಯ ಬೆಲೆ ಅಂಗಡಿ, ಆಹಾರ ಪದಾರ್ಥಗಳು, ಹಣ್ಣು, ತರಕಾರಿ, ಡೇರಿ, ಹಾಲು ಮತ್ತು ಇತರ ಉತ್ಪನ್ನಗಳು, ಮೀನು– ಮಾಂಸ, ಪ್ರಾಣಿಗಳ ಆಹಾರಗಳ (ಫೀಡ್ಸ್) ಮಾರಾಟಕ್ಕೆ ಅವಕಾಶ</p>.<p><span class="Bullet">l</span>ಅಂತರ ರಾಜ್ಯಗಳಿಗೆ ಬಸ್ ಮತ್ತು ರೈಲುಗಳ ಸೇವೆಗೆ ಅವಕಾಶ ಇದೆ. ಸಾರಿಗೆ ಸಂಸ್ಥೆ ಬಸ್ಸುಗಳು, ಖಾಸಗಿ ಬಸ್ಸುಗಳು, ಟ್ಯಾಕ್ಸಿ, ಆಟೋರಿಕ್ಷಾಗಳ ಓಡಾಟಕ್ಕೆ ಅವಕಾಶ ಇದೆ. ಆಸನಗಳ ಒಟ್ಟು ಸಾಮರ್ಥ್ಯದ ಶೇ 50 ರಷ್ಟು ಮಾತ್ರ ಪ್ರಯಾಣಿಕರನ್ನು ಕರೆದೊಯ್ಯಬೇಕು</p>.<p><span class="Bullet">l</span>ಲಾಡ್ಜ್ ಮತ್ತು ಹೋಟೆಲ್ಗಳಲ್ಲಿ ಉಳಿದುಕೊಂಡ ಅತಿಥಿಗಳಿಗೆ ಆಹಾರ ಪೂರೈಕೆ ಮಾಡಬಹುದು</p>.<p><span class="Bullet">l</span>ಸಲೂನು, ಬ್ಯೂಟಿ ಪಾರ್ಲರ್ಗಳು ಕೋವಿಡ್ ನಿಯಮ ಪಾಲಿಸಿ ಕಾರ್ಯಾಚರಣೆ ನಡೆಸಬಹುದು</p>.<p><span class="Bullet">l</span>50 ಜನರ ಮಿತಿಯಲ್ಲಿ ಮದುವೆ ನಡೆಸಬಹುದು</p>.<p><span class="Bullet">l</span>ಶವ ಸಂಸ್ಕಾರ, ಅಂತಿಮ ದರ್ಶನಕ್ಕೆ 20 ಜನರಿಗೆ ಮಾತ್ರ ಅವಕಾಶ</p>.<p class="Briefhead"><strong>ವಾರಾಂತ್ಯ ಪೂರ್ಣ ಬಂದ್</strong></p>.<p>ಶುಕ್ರವಾರ ರಾತ್ರಿ 9 ರಿಂದ ಸೋಮವಾರ ಬೆಳಿಗ್ಗೆ 6 ಗಂಟೆಯವರೆಗೆ ಬಂದ್ ಇರುತ್ತದೆ. ಈ ಸಂದರ್ಭದಲ್ಲಿ ತುರ್ತು ಮತ್ತು ಅಗತ್ಯ ಚಟುವಟಿಕೆಗಳನ್ನು ಬಿಟ್ಟು ಬೇರೆಯದಕ್ಕೆ ಅವಕಾಶ ಇಲ್ಲ. ರೋಗಿಗಳ ಸಾಗಣೆ, ಆರೋಗ್ಯ ಪರೀಕ್ಷೆ, ಲಸಿಕೆ ಹಾಕಿಸಿಕೊಳ್ಳಲು ಹೋಗುವವರಿಗೆ ಮಾತ್ರ ಅವಕಾಶ.</p>.<p><span class="Bullet">l</span>ನೆರೆ ಹೊರೆಯ ಅಂಗಡಿಗಳು, ಹಣ್ಣು ತರಕಾರಿ, ಹಾಲು ಮತ್ತಿತರ ಅಗತ್ಯ ವಸ್ತುಗಳನ್ನು ಬೆಳಿಗ್ಗೆ 6 ರಿಂದ 10 ಗಂಟೆಯ ಒಳಗೆ ಖರೀದಿಸಲು ಅನುಮತಿ.</p>.<p><span class="Bullet">l</span>ಕೈಗಾರಿಕೆಗಳಲ್ಲಿ ಕಾರ್ಯ ನಿರ್ವಹಿಸಲು ಹೋಗುವವರಿಗೆ, ಟೆಲಿಕಾಂ ಸಿಬ್ಬಂದಿ ಮತ್ತು ಈ ಕಾರ್ಯಕ್ಕಾಗಿ ಒಯ್ಯುವ ವಾಹನಗಳು, ಇಂಟರ್ನೆಟ್ ಸೇವೆಗೆ ಹೋಗುವವರಿಗೆ ಮಾತ್ರ ಅವಕಾಶವಿದೆ.</p>.<p><span class="Bullet">l</span>ರೆಸ್ಟೊರೆಂಟ್ ಮೂಲಕ ಪಾರ್ಸೆಲ್ ಒಯ್ಯಲು ಅವಕಾಶ</p>.<p><span class="Bullet">l</span>ಮದುವೆಗೆ ಅವಕಾಶ ಇದ್ದು, 50 ಜನ ಸೇರಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ರಾಜ್ಯ ಸರ್ಕಾರ 14 ದಿನಗಳ ಕಾಲ ರಾತ್ರಿ ಕರ್ಫ್ಯೂ ಮತ್ತು ವಾರಾಂತ್ಯದ ಬಂದ್ ಘೋಷಿಸಿದ್ದು, ಈ ಸಂದರ್ಭದಲ್ಲಿ ಹಲವು ಚಟುವಟಿಕೆಗಳನ್ನು ನಿರ್ಬಂಧಿಸಿ ಆದೇಶ ಹೊರಡಿಸಿದೆ.</p>.<p>ರಾತ್ರಿ ಕರ್ಫ್ಯೂ 9 ಗಂಟೆಯಿಂದ ಮಾರನೇ ದಿನ ಬೆಳಿಗ್ಗೆ 6 ಗಂಟೆಯವರೆಗೆ ಇರುತ್ತದೆ. ಈ ಸಂದರ್ಭದಲ್ಲಿ ಎಲ್ಲ ರೀತಿಯ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ. ಆಸ್ಪತ್ರೆಗೆ ಹೋಗುವವರು, ಅಗತ್ಯ ವಸ್ತುಗಳ ಸಾಗಣೆಗೆ ಅವಕಾಶವಿರುತ್ತದೆ. 14 ದಿನಗಳ ಕಾಲ ಬೆಳಿಗ್ಗೆ 6 ರಿಂದ ರಾತ್ರಿ 9 ರವರೆಗೆ ಹಲವು ಚಟುವಟಿಕೆಗಳ ಮೇಲೆ ನಿರ್ಬಂಧ ವಿಧಿಸಲಾಗಿದೆ. ಅವುಗಳ ವಿವರ ಈ ಕೆಳಗಿನಂತಿದೆ.</p>.<p class="Briefhead"><strong>ಏನೆಲ್ಲ ಇರುವುದಿಲ್ಲ</strong></p>.<p><span class="Bullet">l</span>ಶಾಲೆಗಳು, ಕಾಲೇಜುಗಳು, ಕೋಚಿಂಗ್ ಕೇಂದ್ರಗಳು. (ಆನ್ಲೈನ್, ದೂರಶಿಕ್ಷಣ ಮುಂದುವರೆಸಬಹುದು)</p>.<p><span class="Bullet">l</span>ಸಿನಿಮಾ ಹಾಲ್ಗಳು, ಶಾಪಿಂಗ್ ಮಾಲ್, ಜಿಮ್ನಾಷಿಯಂ, ಯೋಗ ಕೇಂದ್ರಗಳು, ಸ್ಪಾ, ಕ್ರೀಡಾ ಕಾಂಪ್ಲೆಕ್ಸ್ಗಳು, ಸ್ಟೇಡಿಯಂ, ಈಜುಕೊಳ, ಮನರಂಜನಾ ಅಮ್ಯೂಸ್ಮೆಂಟ್ ಪಾರ್ಕ್, ಬಾರ್, ಕ್ಲಬ್, ಆಡಿಟೋರಿಯಂಗಳು ಮತ್ತಿತರ ಸಮಾವೇಶದ ತಾಣಗಳು</p>.<p><span class="Bullet">l</span>ಎಲ್ಲ ರೀತಿಯ ಸಮಾವೇಶಗಳು, ಎಲ್ಲಾ ಧಾರ್ಮಿಕ ಸ್ಥಳಗಳು, ಪೂಜಾ, ಪ್ರಾರ್ಥನಾ ಮಂದಿರಗಳಿಗೆ ಭಕ್ತರಿಗೆ ಅವಕಾಶ ಇಲ್ಲ. ಆದರೆ, ಪೂಜಾ ಕೈಂಕರ್ಯ ನಡೆಸಲು ಅರ್ಚಕರಿಗೆ ಅವಕಾಶ ಇದೆ. ಆಯಾ ಧರ್ಮಗಳ ಧಾರ್ಮಿಕ ವಿಧಿ–ವಿಧಾನ ನಡೆಸಲು ಅವಕಾಶ ಇದೆ</p>.<p class="Briefhead"><strong>ಯಾವುದಕ್ಕೆಲ್ಲಾ ಅವಕಾಶ ಇದೆ</strong></p>.<p><span class="Bullet">l</span>ನೆರೆಹೊರೆಯ ಕಿರಾಣಿ ಅಂಗಡಿ, ನ್ಯಾಯ ಬೆಲೆ ಅಂಗಡಿ, ಆಹಾರ ಪದಾರ್ಥಗಳು, ಹಣ್ಣು, ತರಕಾರಿ, ಡೇರಿ, ಹಾಲು ಮತ್ತು ಇತರ ಉತ್ಪನ್ನಗಳು, ಮೀನು– ಮಾಂಸ, ಪ್ರಾಣಿಗಳ ಆಹಾರಗಳ (ಫೀಡ್ಸ್) ಮಾರಾಟಕ್ಕೆ ಅವಕಾಶ</p>.<p><span class="Bullet">l</span>ಅಂತರ ರಾಜ್ಯಗಳಿಗೆ ಬಸ್ ಮತ್ತು ರೈಲುಗಳ ಸೇವೆಗೆ ಅವಕಾಶ ಇದೆ. ಸಾರಿಗೆ ಸಂಸ್ಥೆ ಬಸ್ಸುಗಳು, ಖಾಸಗಿ ಬಸ್ಸುಗಳು, ಟ್ಯಾಕ್ಸಿ, ಆಟೋರಿಕ್ಷಾಗಳ ಓಡಾಟಕ್ಕೆ ಅವಕಾಶ ಇದೆ. ಆಸನಗಳ ಒಟ್ಟು ಸಾಮರ್ಥ್ಯದ ಶೇ 50 ರಷ್ಟು ಮಾತ್ರ ಪ್ರಯಾಣಿಕರನ್ನು ಕರೆದೊಯ್ಯಬೇಕು</p>.<p><span class="Bullet">l</span>ಲಾಡ್ಜ್ ಮತ್ತು ಹೋಟೆಲ್ಗಳಲ್ಲಿ ಉಳಿದುಕೊಂಡ ಅತಿಥಿಗಳಿಗೆ ಆಹಾರ ಪೂರೈಕೆ ಮಾಡಬಹುದು</p>.<p><span class="Bullet">l</span>ಸಲೂನು, ಬ್ಯೂಟಿ ಪಾರ್ಲರ್ಗಳು ಕೋವಿಡ್ ನಿಯಮ ಪಾಲಿಸಿ ಕಾರ್ಯಾಚರಣೆ ನಡೆಸಬಹುದು</p>.<p><span class="Bullet">l</span>50 ಜನರ ಮಿತಿಯಲ್ಲಿ ಮದುವೆ ನಡೆಸಬಹುದು</p>.<p><span class="Bullet">l</span>ಶವ ಸಂಸ್ಕಾರ, ಅಂತಿಮ ದರ್ಶನಕ್ಕೆ 20 ಜನರಿಗೆ ಮಾತ್ರ ಅವಕಾಶ</p>.<p class="Briefhead"><strong>ವಾರಾಂತ್ಯ ಪೂರ್ಣ ಬಂದ್</strong></p>.<p>ಶುಕ್ರವಾರ ರಾತ್ರಿ 9 ರಿಂದ ಸೋಮವಾರ ಬೆಳಿಗ್ಗೆ 6 ಗಂಟೆಯವರೆಗೆ ಬಂದ್ ಇರುತ್ತದೆ. ಈ ಸಂದರ್ಭದಲ್ಲಿ ತುರ್ತು ಮತ್ತು ಅಗತ್ಯ ಚಟುವಟಿಕೆಗಳನ್ನು ಬಿಟ್ಟು ಬೇರೆಯದಕ್ಕೆ ಅವಕಾಶ ಇಲ್ಲ. ರೋಗಿಗಳ ಸಾಗಣೆ, ಆರೋಗ್ಯ ಪರೀಕ್ಷೆ, ಲಸಿಕೆ ಹಾಕಿಸಿಕೊಳ್ಳಲು ಹೋಗುವವರಿಗೆ ಮಾತ್ರ ಅವಕಾಶ.</p>.<p><span class="Bullet">l</span>ನೆರೆ ಹೊರೆಯ ಅಂಗಡಿಗಳು, ಹಣ್ಣು ತರಕಾರಿ, ಹಾಲು ಮತ್ತಿತರ ಅಗತ್ಯ ವಸ್ತುಗಳನ್ನು ಬೆಳಿಗ್ಗೆ 6 ರಿಂದ 10 ಗಂಟೆಯ ಒಳಗೆ ಖರೀದಿಸಲು ಅನುಮತಿ.</p>.<p><span class="Bullet">l</span>ಕೈಗಾರಿಕೆಗಳಲ್ಲಿ ಕಾರ್ಯ ನಿರ್ವಹಿಸಲು ಹೋಗುವವರಿಗೆ, ಟೆಲಿಕಾಂ ಸಿಬ್ಬಂದಿ ಮತ್ತು ಈ ಕಾರ್ಯಕ್ಕಾಗಿ ಒಯ್ಯುವ ವಾಹನಗಳು, ಇಂಟರ್ನೆಟ್ ಸೇವೆಗೆ ಹೋಗುವವರಿಗೆ ಮಾತ್ರ ಅವಕಾಶವಿದೆ.</p>.<p><span class="Bullet">l</span>ರೆಸ್ಟೊರೆಂಟ್ ಮೂಲಕ ಪಾರ್ಸೆಲ್ ಒಯ್ಯಲು ಅವಕಾಶ</p>.<p><span class="Bullet">l</span>ಮದುವೆಗೆ ಅವಕಾಶ ಇದ್ದು, 50 ಜನ ಸೇರಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>