‘ಎನ್ಇಪಿ, ಜನಸಾಮಾನ್ಯರ ಬದಲು ಕಾರ್ಪೊರೇಟ್ ವಲಯದ ಒಳಿತು ಬಯಸುತ್ತಿದೆ. ಶಿಕ್ಷಣ ಮಾಧ್ಯಮ ಮತ್ತು ಭಾಷಾ ಕಲಿಕೆಯ ಬಗ್ಗೆ ಸ್ಪಷ್ಟತೆ ಹಾಗೂ ಅಗತ್ಯ ಮುನ್ನೋಟಗಳನ್ನು ಇದು ಒಳಗೊಂಡಿಲ್ಲ. ಹಲವು ವೈರುಧ್ಯಗಳಿರುವ ಈ ಶಿಕ್ಷಣ ನೀತಿಯನ್ನು ತಿರಸ್ಕರಿಸಬೇಕೆಂದು ಸಭೆ ಒತ್ತಾಯಿಸುತ್ತದೆ’ ಎಂದು ಗಾಂಧಿ ವಿಚಾರ ಪರಿಷತ್ ಅಧ್ಯಕ್ಷ ಪ.ಮಲ್ಲೇಶ್ ನಿರ್ಣಯ ಪ್ರಕಟಿಸಿದರು.