<p><strong>ಬೆಂಗಳೂರು: </strong>ಸಾಮಾಜಿಕ ಸೇವೆ ಮಾಡುವುದಾಗಿ ಹೇಳಿಕೊಂಡಿರುವ ಚಿಲುಮೆ ಟ್ರಸ್ಟ್ ಕಚೇರಿಯಲ್ಲಿ ನೋಟು ಎಣಿಕೆ ಯಂತ್ರವನ್ನು ಏಕೆ ಇರಿಸಿಕೊಳ್ಳಲಾಗಿತ್ತು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದರು.</p>.<p>ಕೆಪಿಸಿಸಿ ಕಚೇರಿಯಿಂದ ಶನಿವಾರ ನಡೆದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಜನ್ಮದಿನಾಚರಣೆಯಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರ ಜತೆ ಅವರು ಮಾತನಾಡಿದರು.</p>.<p>ಯಾವುದೇ ಟ್ರಸ್ಟ್ ₹2,000ಕ್ಕಿಂತ ಹೆಚ್ಚು ನಗದು ದೇಣಿಗೆ ಪಡೆಯುವಂತಿಲ್ಲ. ಆದರೆ, ಚಿಲುಮೆ ಕಚೇರಿಯಲ್ಲಿ ಪೊಲೀಸರು ನಡೆಸದ ಶೋಧದ ವೇಳೆ ಎರಡು ನೋಟು ಎಣಿಕೆ ಯಂತ್ರಗಳು ಪತ್ತೆಯಾಗಿವೆ ಎಂಬ ಮಾಹಿತಿ ಲಭಿಸಿದೆ. ಯಾವ ಹಣ ಎಣಿಸಲು ಟ್ರಸ್ಟ್ ಕಚೇರಿಯಲ್ಲಿ ಯಂತ್ರ ಇರಿಸಲಾಗಿತ್ತು ಎಂದು ಪ್ರಶ್ನಿಸಿದರು.</p>.<p>ಚಿಲುಮೆ ಕಚೇರಿಯಲ್ಲಿ ಕಪ್ಪು ಹಣವನ್ನು ಬಿಳಿ ಹಣವನ್ನಾಗಿ ಪರಿವರ್ತಿಸುವ ಕೆಲಸ ನಡೆಯುತ್ತಿತ್ತು. ಈ ವಿಚಾರದಲ್ಲಿ ದಾಖಲೆ ಸಮೇತ ಮಾತನಾಡುತ್ತೇವೆ ಎಂದು ಹೇಳಿದರು.</p>.<p>ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ದಾಖಲೆ ಸಹಿತ ದೂರು ನೀಡಿದ್ದೇವೆ. ಆದರೆ, ಆರೋಪಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.</p>.<p><strong>ಓದಿ...</strong></p>.<p><a href="https://www.prajavani.net/karnataka-news/siddaramaiah-demands-resignation-of-cm-bommai-judicial-probe-into-theft-of-voter-data-in-bengaluru-989594.html" target="_blank">ಮತದಾರರ ಪಟ್ಟಿ ಪರಿಷ್ಕರಣೆ ಎಂದರೆ ರಾಕಿಭಾಯ್ನ ಸೇಡಿನ ಕಥೆಯಲ್ಲ: ಸಿದ್ದರಾಮಯ್ಯ</a></p>.<p><a href="https://www.prajavani.net/karnataka-news/chilume-case-cm-bommai-rejects-judicial-probe-989838.html" target="_blank">‘ಚಿಲುಮೆ’ ಪ್ರಕರಣ: ನ್ಯಾಯಾಂಗ ತನಿಖೆತಳ್ಳಿ ಹಾಕಿದ ಮುಖ್ಯಮಂತ್ರಿ ಬೊಮ್ಮಾಯಿ</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಸಾಮಾಜಿಕ ಸೇವೆ ಮಾಡುವುದಾಗಿ ಹೇಳಿಕೊಂಡಿರುವ ಚಿಲುಮೆ ಟ್ರಸ್ಟ್ ಕಚೇರಿಯಲ್ಲಿ ನೋಟು ಎಣಿಕೆ ಯಂತ್ರವನ್ನು ಏಕೆ ಇರಿಸಿಕೊಳ್ಳಲಾಗಿತ್ತು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದರು.</p>.<p>ಕೆಪಿಸಿಸಿ ಕಚೇರಿಯಿಂದ ಶನಿವಾರ ನಡೆದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಜನ್ಮದಿನಾಚರಣೆಯಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರ ಜತೆ ಅವರು ಮಾತನಾಡಿದರು.</p>.<p>ಯಾವುದೇ ಟ್ರಸ್ಟ್ ₹2,000ಕ್ಕಿಂತ ಹೆಚ್ಚು ನಗದು ದೇಣಿಗೆ ಪಡೆಯುವಂತಿಲ್ಲ. ಆದರೆ, ಚಿಲುಮೆ ಕಚೇರಿಯಲ್ಲಿ ಪೊಲೀಸರು ನಡೆಸದ ಶೋಧದ ವೇಳೆ ಎರಡು ನೋಟು ಎಣಿಕೆ ಯಂತ್ರಗಳು ಪತ್ತೆಯಾಗಿವೆ ಎಂಬ ಮಾಹಿತಿ ಲಭಿಸಿದೆ. ಯಾವ ಹಣ ಎಣಿಸಲು ಟ್ರಸ್ಟ್ ಕಚೇರಿಯಲ್ಲಿ ಯಂತ್ರ ಇರಿಸಲಾಗಿತ್ತು ಎಂದು ಪ್ರಶ್ನಿಸಿದರು.</p>.<p>ಚಿಲುಮೆ ಕಚೇರಿಯಲ್ಲಿ ಕಪ್ಪು ಹಣವನ್ನು ಬಿಳಿ ಹಣವನ್ನಾಗಿ ಪರಿವರ್ತಿಸುವ ಕೆಲಸ ನಡೆಯುತ್ತಿತ್ತು. ಈ ವಿಚಾರದಲ್ಲಿ ದಾಖಲೆ ಸಮೇತ ಮಾತನಾಡುತ್ತೇವೆ ಎಂದು ಹೇಳಿದರು.</p>.<p>ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ದಾಖಲೆ ಸಹಿತ ದೂರು ನೀಡಿದ್ದೇವೆ. ಆದರೆ, ಆರೋಪಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.</p>.<p><strong>ಓದಿ...</strong></p>.<p><a href="https://www.prajavani.net/karnataka-news/siddaramaiah-demands-resignation-of-cm-bommai-judicial-probe-into-theft-of-voter-data-in-bengaluru-989594.html" target="_blank">ಮತದಾರರ ಪಟ್ಟಿ ಪರಿಷ್ಕರಣೆ ಎಂದರೆ ರಾಕಿಭಾಯ್ನ ಸೇಡಿನ ಕಥೆಯಲ್ಲ: ಸಿದ್ದರಾಮಯ್ಯ</a></p>.<p><a href="https://www.prajavani.net/karnataka-news/chilume-case-cm-bommai-rejects-judicial-probe-989838.html" target="_blank">‘ಚಿಲುಮೆ’ ಪ್ರಕರಣ: ನ್ಯಾಯಾಂಗ ತನಿಖೆತಳ್ಳಿ ಹಾಕಿದ ಮುಖ್ಯಮಂತ್ರಿ ಬೊಮ್ಮಾಯಿ</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>