<p><strong>ಬೆಂಗಳೂರು:</strong> ರಾಜ್ಯದ ಹಲವು ಮಠಾಧೀಶರು ಜಾತಿ ರಾಜಕಾರಣದೊಳಕ್ಕೆ ಸಕ್ರಿಯವಾಗಿ ಧುಮುಕಿ, ಜಾತಿಯ ಕಾರಣಕ್ಕಾಗಿಯೇ ಜನವಿರೋಧಿ ಸರ್ಕಾರವೊಂದರ ಬೆಂಬಲಕ್ಕೆ ನಿಂತಿರುವ ಪರಿಯು ತಲೆ ತಗ್ಗಿಸುವಂತಿದೆ ಎಂದು ಮಾಜಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಟೀಕಿಸಿದ್ದಾರೆ.</p>.<p>ಮಠಾಧೀಶರ ವರ್ತನೆ ಕುರಿತು ಬುಧವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಮಠಾಧೀಶರು ತಮ್ಮ ಕರ್ತವ್ಯವನ್ನು ಮರೆತು ಜನವಿರೋಧಿ ಸರ್ಕಾರವನ್ನು ಬೆಂಬಲಿಸುತ್ತಿರುವುದು ಜಾತಿವಾದಿ ಸಮಾಜವನ್ನು ಮುಂದುವರಿಸುವ ಅಪಾಯದ ಸೂಚನೆ ನೀಡುತ್ತಿದೆ’ ಎಂದು ಹೇಳಿದ್ದಾರೆ.</p>.<p>ಬೆಲೆ ಏರಿಕೆ, ಕಳಪೆ ಆಡಳಿತದ ಮೂಲಕ ಸಾಮಾನ್ಯ ಜನರ ಬದುಕು ದುಸ್ಥಿತಿಗೆ ತಲುಪುವಂತೆ ಮಾಡಿರುವ ಸರ್ಕಾರಕ್ಕೆ ಮಠಾಧೀಶರು ಚಾಟಿ ಬೀಸಬೇಕಿತ್ತು. ಆದರೆ, ಈ ಜವಾಬ್ದಾರಿಯನ್ನು ಮರೆತ ಸ್ವಾಮಿಗಳು ಜಾತಿಯ ಕಾರಣಕ್ಕೆ ಜನವಿರೋಧಿಗಳ ಬೆಂಬಲಕ್ಕೆ ನಿಂತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.</p>.<p>‘ತೈಲ ಬೆಲೆ ಏರಿಕೆ ಮತ್ತು ಕೋಮುವಾದಿಗಳ ವಿರುದ್ಧ ಮಠಾಧೀಶರು ಒಗ್ಗೂಡಿ ಧ್ವನಿ ಎತ್ತಿದ್ದರೆ ನೆಮ್ಮದಿ ಅನಿಸುತ್ತಿತ್ತು. ಆದರೆ, ಜನರ ಬದುಕಿಗೆ ಅನನುಕೂಲ ಉಂಟುಮಾಡಿರುವ ನಾಯಕನೊಬ್ಬನ ತಲೆಯನ್ನು ಕೇವಲ ಜಾತಿಯ ಕಾರಣಕ್ಕಾಗಿ ಕಾಯಲು ಒಗ್ಗಟ್ಟಾಗಿರುವುದು ಬೇಸರದ ಸಂಗತಿ’ ಎಂದು ಮಹದೇವಪ್ಪ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ರಾಜ್ಯದ ಹಲವು ಮಠಾಧೀಶರು ಜಾತಿ ರಾಜಕಾರಣದೊಳಕ್ಕೆ ಸಕ್ರಿಯವಾಗಿ ಧುಮುಕಿ, ಜಾತಿಯ ಕಾರಣಕ್ಕಾಗಿಯೇ ಜನವಿರೋಧಿ ಸರ್ಕಾರವೊಂದರ ಬೆಂಬಲಕ್ಕೆ ನಿಂತಿರುವ ಪರಿಯು ತಲೆ ತಗ್ಗಿಸುವಂತಿದೆ ಎಂದು ಮಾಜಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಟೀಕಿಸಿದ್ದಾರೆ.</p>.<p>ಮಠಾಧೀಶರ ವರ್ತನೆ ಕುರಿತು ಬುಧವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಮಠಾಧೀಶರು ತಮ್ಮ ಕರ್ತವ್ಯವನ್ನು ಮರೆತು ಜನವಿರೋಧಿ ಸರ್ಕಾರವನ್ನು ಬೆಂಬಲಿಸುತ್ತಿರುವುದು ಜಾತಿವಾದಿ ಸಮಾಜವನ್ನು ಮುಂದುವರಿಸುವ ಅಪಾಯದ ಸೂಚನೆ ನೀಡುತ್ತಿದೆ’ ಎಂದು ಹೇಳಿದ್ದಾರೆ.</p>.<p>ಬೆಲೆ ಏರಿಕೆ, ಕಳಪೆ ಆಡಳಿತದ ಮೂಲಕ ಸಾಮಾನ್ಯ ಜನರ ಬದುಕು ದುಸ್ಥಿತಿಗೆ ತಲುಪುವಂತೆ ಮಾಡಿರುವ ಸರ್ಕಾರಕ್ಕೆ ಮಠಾಧೀಶರು ಚಾಟಿ ಬೀಸಬೇಕಿತ್ತು. ಆದರೆ, ಈ ಜವಾಬ್ದಾರಿಯನ್ನು ಮರೆತ ಸ್ವಾಮಿಗಳು ಜಾತಿಯ ಕಾರಣಕ್ಕೆ ಜನವಿರೋಧಿಗಳ ಬೆಂಬಲಕ್ಕೆ ನಿಂತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.</p>.<p>‘ತೈಲ ಬೆಲೆ ಏರಿಕೆ ಮತ್ತು ಕೋಮುವಾದಿಗಳ ವಿರುದ್ಧ ಮಠಾಧೀಶರು ಒಗ್ಗೂಡಿ ಧ್ವನಿ ಎತ್ತಿದ್ದರೆ ನೆಮ್ಮದಿ ಅನಿಸುತ್ತಿತ್ತು. ಆದರೆ, ಜನರ ಬದುಕಿಗೆ ಅನನುಕೂಲ ಉಂಟುಮಾಡಿರುವ ನಾಯಕನೊಬ್ಬನ ತಲೆಯನ್ನು ಕೇವಲ ಜಾತಿಯ ಕಾರಣಕ್ಕಾಗಿ ಕಾಯಲು ಒಗ್ಗಟ್ಟಾಗಿರುವುದು ಬೇಸರದ ಸಂಗತಿ’ ಎಂದು ಮಹದೇವಪ್ಪ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>