ವಿಚಾರಣೆ ಎದುರಿಸಿದ ಬಿನೇಶ್, ಅನೂಪ್ಗೆ ಸ್ನೇಹಿತರಿಂದ ಹಣ ಕೊಡಿಸಿರುವುದಾಗಿ ತನಿಖಾಧಿಕಾರಿಗಳಿಗೆ ತಿಳಿಸಿದ್ದರು. ಇದಕ್ಕೆ ಸೂಕ್ತ ದಾಖಲೆ ಸಲ್ಲಿಸುವಂತೆ ಇಡಿ ಸೂಚಿಸಿತ್ತು. ಈ ಸಂಬಂಧ ಶಾಂತಿನಗರದಲ್ಲಿರುವ ಇಡಿ ಕಚೇರಿಯಲ್ಲಿ ಬಿನೇಶ್ ಎರಡನೇ ಬಾರಿಯ ವಿಚಾರಣೆಗೆ ಗುರುವಾರ ಹಾಜರಾದರು. ಬಿನೇಶ್ ತಂದಿದ್ದ ದಾಖಲೆಗಳೊಂದಿಗೆ ಸತತ ನಾಲ್ಕು ಗಂಟೆಗಳ ವಿಚಾರಣೆ ಬಳಿಕ ಇಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.