<p><strong>ಬೆಂಗಳೂರು:</strong> ಬೀದರ್ ಹೊರವಲಯದ ಕೊಳಾರ ಕೈಗಾರಿಕೆ ಪ್ರದೇಶದಲ್ಲಿರುವ ‘ಇಂದು ಡ್ರಗ್ಸ್’ ಕಂಪನಿಯ ಕಾರ್ಖಾನೆ ಮೇಲೆ ರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ಘಟಕ (ಎನ್ಸಿಬಿ) ಅಧಿಕಾರಿಗಳು ದಾಳಿ ಮಾಡಿದ್ದು, ₹ 2 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ.</p>.<p>'ಬೀದರ್ ವಿಳಾಸ ನೀಡಿ ಕಂಪನಿ ನೋಂದಣಿ ಆಗಿತ್ತು. ಆಲ್ಫ್ರಝೋಲಮ್ ಮಾದಕ ವಸ್ತುವನ್ನು ಅಕ್ರಮವಾಗಿ ಉತ್ಪಾದಿಸಿ ಕರ್ನಾಟಕ ಹಾಗೂ ತೆಲಂಗಾಣದಲ್ಲಿ ಮಾರಾಟ ಮಾಡುತ್ತಿತ್ತು. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ 91 ಕೆ.ಜಿ 500 ಗ್ರಾಂ ಆಲ್ಫ್ರಝೋಲಮ್ ಹಾಗೂ ₹ 62 ಲಕ್ಷ ನಗದು ಜಪ್ತಿ ಮಾಡಲಾಗಿದೆ’ ಎಂದು ಎನ್ಸಿಬಿ ಬೆಂಗಳೂರು ವಲಯದ ನಿರ್ದೇಶಕ ಅಮಿತ್ ಗಾವಟೆ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>’ತೆಲಂಗಾಣದ ಎಸ್.ಭಾಸ್ಕರ್ ಹಾಗೂ ರಾಸಾಯನಿಕ ತಜ್ಞ ವೈ.ವಿ. ರೆಡ್ಡಿ ಸೇರಿಕೊಂಡು ಕಂಪನಿ ನಡೆಸುತ್ತಿದ್ದರು. ಅವರ ಕೃತ್ಯಕ್ಕೆ ಎಸ್. ಮೆನನ್, ಅಮೃತ್ ಹಾಗೂ ಎನ್.ವಿ. ರೆಡ್ಡಿ ಸಹಕಾರ ನೀಡಿದ್ದರು. ಇದೀಗ<br />ಐವರನ್ನು ಬಂಧಿಸಲಾಗಿದೆ’ ಎಂದೂ ಹೇಳಿದರು.</p>.<p>‘ಹಲವು ವರ್ಷಗಳಿಂದ ಕಾರ್ಖಾನೆ ಕಾರ್ಯನಿರ್ವಹಿಸುತ್ತಿತ್ತು. ಸರ್ಕಾರ ನಿಷೇಧ ಮಾಡಿರುವ ಆಲ್ಫ್ರಝೋಲಮ್ ತಯಾರಿಸಿ, ಮಿನಿ ಟ್ರಕ್ನಲ್ಲಿ ತೆಲಂಗಾಣ ಹಾಗೂ ಕರ್ನಾಟಕದ ಹಲವು ಜಿಲ್ಲೆಗಳಿಗೆ ಕಳುಹಿಸಲಾಗುತ್ತಿತ್ತು. ಇದರಿಂದ ಆರೋಪಿಗಳು, ಕೋಟ್ಯಂತರ ರೂಪಾಯಿ ಸಂಪಾದಿಸಿದ್ದರು. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ವಿಶೇಷ ತಂಡ ರಚಿಸಿ ಕಾರ್ಯಾಚರಣೆ ನಡೆಸಲಾಯಿತು. ಆರೋಪಿಗಳು, ಬ್ಯಾರಲ್ಗಳಲ್ಲಿ ಆಲ್ಫ್ರಝೋಲಮ್ ತುಂಬಿಟ್ಟಿದ್ದರು’ ಎಂದೂ ಗಾವಟೆ ವಿವರಿಸಿದರು.</p>.<p class="Subhead">ಮನೆ ಮೇಲೂ ದಾಳಿ: ‘ಕಂಪನಿ ಪಾಲುದಾರರಲ್ಲಿ ಒಬ್ಬನಾದ ಎನ್.ವಿ. ರೆಡ್ಡಿಯ ಹೈದರಾಬಾದ್ನಲ್ಲಿರುವ ಮನೆ ಮೇಲೂ ದಾಳಿ ಮಾಡಲಾಗಿದೆ. ಆತನ ಮನೆಯಲ್ಲೇ ನಗದು ಸಿಕ್ಕಿದೆ. ಡ್ರಗ್ ಜಾಲದಲ್ಲಿ ಹಲವರು ಭಾಗಿಯಾಗಿರುವ ಮಾಹಿತಿ ಇದ್ದು, ತನಿಖೆ ಮುಂದುವರಿದಿದೆ’ ಎಂದೂ ಎನ್ಸಿಬಿ ಮೂಲಗಳು ಹೇಳಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಬೀದರ್ ಹೊರವಲಯದ ಕೊಳಾರ ಕೈಗಾರಿಕೆ ಪ್ರದೇಶದಲ್ಲಿರುವ ‘ಇಂದು ಡ್ರಗ್ಸ್’ ಕಂಪನಿಯ ಕಾರ್ಖಾನೆ ಮೇಲೆ ರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ಘಟಕ (ಎನ್ಸಿಬಿ) ಅಧಿಕಾರಿಗಳು ದಾಳಿ ಮಾಡಿದ್ದು, ₹ 2 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ.</p>.<p>'ಬೀದರ್ ವಿಳಾಸ ನೀಡಿ ಕಂಪನಿ ನೋಂದಣಿ ಆಗಿತ್ತು. ಆಲ್ಫ್ರಝೋಲಮ್ ಮಾದಕ ವಸ್ತುವನ್ನು ಅಕ್ರಮವಾಗಿ ಉತ್ಪಾದಿಸಿ ಕರ್ನಾಟಕ ಹಾಗೂ ತೆಲಂಗಾಣದಲ್ಲಿ ಮಾರಾಟ ಮಾಡುತ್ತಿತ್ತು. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ 91 ಕೆ.ಜಿ 500 ಗ್ರಾಂ ಆಲ್ಫ್ರಝೋಲಮ್ ಹಾಗೂ ₹ 62 ಲಕ್ಷ ನಗದು ಜಪ್ತಿ ಮಾಡಲಾಗಿದೆ’ ಎಂದು ಎನ್ಸಿಬಿ ಬೆಂಗಳೂರು ವಲಯದ ನಿರ್ದೇಶಕ ಅಮಿತ್ ಗಾವಟೆ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>’ತೆಲಂಗಾಣದ ಎಸ್.ಭಾಸ್ಕರ್ ಹಾಗೂ ರಾಸಾಯನಿಕ ತಜ್ಞ ವೈ.ವಿ. ರೆಡ್ಡಿ ಸೇರಿಕೊಂಡು ಕಂಪನಿ ನಡೆಸುತ್ತಿದ್ದರು. ಅವರ ಕೃತ್ಯಕ್ಕೆ ಎಸ್. ಮೆನನ್, ಅಮೃತ್ ಹಾಗೂ ಎನ್.ವಿ. ರೆಡ್ಡಿ ಸಹಕಾರ ನೀಡಿದ್ದರು. ಇದೀಗ<br />ಐವರನ್ನು ಬಂಧಿಸಲಾಗಿದೆ’ ಎಂದೂ ಹೇಳಿದರು.</p>.<p>‘ಹಲವು ವರ್ಷಗಳಿಂದ ಕಾರ್ಖಾನೆ ಕಾರ್ಯನಿರ್ವಹಿಸುತ್ತಿತ್ತು. ಸರ್ಕಾರ ನಿಷೇಧ ಮಾಡಿರುವ ಆಲ್ಫ್ರಝೋಲಮ್ ತಯಾರಿಸಿ, ಮಿನಿ ಟ್ರಕ್ನಲ್ಲಿ ತೆಲಂಗಾಣ ಹಾಗೂ ಕರ್ನಾಟಕದ ಹಲವು ಜಿಲ್ಲೆಗಳಿಗೆ ಕಳುಹಿಸಲಾಗುತ್ತಿತ್ತು. ಇದರಿಂದ ಆರೋಪಿಗಳು, ಕೋಟ್ಯಂತರ ರೂಪಾಯಿ ಸಂಪಾದಿಸಿದ್ದರು. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ವಿಶೇಷ ತಂಡ ರಚಿಸಿ ಕಾರ್ಯಾಚರಣೆ ನಡೆಸಲಾಯಿತು. ಆರೋಪಿಗಳು, ಬ್ಯಾರಲ್ಗಳಲ್ಲಿ ಆಲ್ಫ್ರಝೋಲಮ್ ತುಂಬಿಟ್ಟಿದ್ದರು’ ಎಂದೂ ಗಾವಟೆ ವಿವರಿಸಿದರು.</p>.<p class="Subhead">ಮನೆ ಮೇಲೂ ದಾಳಿ: ‘ಕಂಪನಿ ಪಾಲುದಾರರಲ್ಲಿ ಒಬ್ಬನಾದ ಎನ್.ವಿ. ರೆಡ್ಡಿಯ ಹೈದರಾಬಾದ್ನಲ್ಲಿರುವ ಮನೆ ಮೇಲೂ ದಾಳಿ ಮಾಡಲಾಗಿದೆ. ಆತನ ಮನೆಯಲ್ಲೇ ನಗದು ಸಿಕ್ಕಿದೆ. ಡ್ರಗ್ ಜಾಲದಲ್ಲಿ ಹಲವರು ಭಾಗಿಯಾಗಿರುವ ಮಾಹಿತಿ ಇದ್ದು, ತನಿಖೆ ಮುಂದುವರಿದಿದೆ’ ಎಂದೂ ಎನ್ಸಿಬಿ ಮೂಲಗಳು ಹೇಳಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>