ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸ್ಥೆಯ ಸಂಸ್ಥಾಪಕ ಆರ್. ಶ್ರೀನಿವಾಸ್, ‘ಆ್ಯಪ್ಗೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿದೆ. ಆಹಾರೋತ್ಪನ್ನಗಳ ವರದಿಯು 30 ಸೆಕೆಂಡ್ಗಳಲ್ಲಿ ಸಿದ್ಧಗೊಳ್ಳಲಿದೆ. ಸ್ಥಳಕ್ಕೆ ಭೇಟಿ ನೀಡಿ,
ಆಹಾರೋತ್ಪನ್ನಗಳನ್ನು ಪರಿಶೀಲಿಸಬೇಕಾದ ಅಗತ್ಯತೆವಿಲ್ಲ. ರೈತರು ಮೊಬೈಲ್ ಫೋನ್ಗಳ ನೆರವಿನಿಂದ ಛಾಯಾಚಿತ್ರ ತೆಗೆದು, ಆಹಾರೋತ್ಪನ್ನದ ಗುಣಮಟ್ಟವನ್ನು ಅಳೆಯಬಹುದಾಗಿದೆ. ಈ ಆ್ಯಪ್ನಿಂದ ಮಧ್ಯವರ್ತಿಗಳ ಹಾವಳಿಯೂ ತಪ್ಪಲಿದ್ದು, ರೈತರಿಗೆ ಉತ್ತಮ ಬೆಲೆ ಸಿಗಲಿದೆ. ಗ್ರಾಹಕರೂ ಗುಣಮಟ್ಟದ ಉತ್ಪನ್ನಗಳನ್ನು ನೇರವಾಗಿ ರೈತರಿಂದ ಖರೀದಿಸಬಹುದು’ ಎಂದು ಹೇಳಿದರು.