ಈಗಾಗಲೇ ₹ 30 ಲಕ್ಷವೆಚ್ಚದಲ್ಲಿ ಪ್ರಾಥಮಿಕ, ಪ್ರೌಢಶಾಲೆ ಮತ್ತು ಬಾಲಕಿಯರ ಮತ್ತು ಬಾಲಕರ ವಿದ್ಯಾರ್ಥಿ ನಿಲಯಗಳನ್ನು ದುರಸ್ತಿ ಮಾಡಿಸಿ ಸುಣ್ಣ, ಬಣ್ಣ ಮಾಡಿಸಲಾಗಿದೆ. ಶೈಕ್ಷಣಿಕ ಪ್ರಗತಿಗೆ ಸಿಬ್ಬಂದಿ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಕೈಲಾದ ಮಟ್ಟಿಗೆ ನೆರವಾಗುವುದು ಎಲ್ಲರ ಆದ್ಯ ಕರ್ತವ್ಯ. ಹೀಗಾಗಿ ಎಂದಿನಂತೆ ಮಠದ ಭಕ್ತರು, ಅನುಯಾಯಿ, ಅಭಿಮಾನಿಗಳು, ಹಳೆಯ ವಿದ್ಯಾರ್ಥಿಗಳು ಮೊದಲಾದವರೆಲ್ಲರೂ ಹಣದ ರೂಪದಲ್ಲಿ, ದವಸ–ಧಾನ್ಯ, ತರಕಾರಿ, ಶೈಕ್ಷಣಿಕ ಪರಿಕರಗಳ ರೂಪದಲ್ಲಿ ಸಹಾಯ ಮಾಡುವವರು ಮುಂದೆ ಬರಬೇಕಾಗಿದೆ.