ಬೆಂಗಳೂರು: ಶಾಲಾ ಪ್ರದೇಶ ಮಾರಾಟ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ನಿಲ್ಲಿಸಬೇಕೆಂದು ಕಾಂಗ್ರೆಸ್ ಒತ್ತಾಯಿಸಿದೆ.
ಈ ವಿಚಾರವಾಗಿ ‘ಪ್ರಜಾವಾಣಿ’ ವರದಿಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಕೆಪಿಸಿಸಿ, ‘ಕೇಂದ್ರದಿಂದ ಹಿಡಿದು ರಾಜ್ಯದವರೆಗೂ, ಮಾರಾಟವೇ ಬಿಜೆಪಿಯ ಮೂಲ ಸಿದ್ದಾಂತ. ವಿಧಾನ ಸೌಧವು ವ್ಯಾಪಾರ ಸೌಧವಾಗಿರುವುದು ಹೊಸ ವಿಷಯವೇನಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದೆ.
‘ಸ್ವತಂತ್ರ ಪೂರ್ವದಲ್ಲೇ ಶುರುವಾಗಿದ್ದ ಚಿಕ್ಕಪೇಟೆಯ ಐತಿಹಾಸಿಕ ಶಾಲೆಯ ಪ್ರದೇಶವನ್ನು ಖಾಸಗಿಯವರಿಗೆ ಮಾರಾಟಕ್ಕೆ ಮುಂದಾಗಿರುವುದು ಖಂಡನೀಯ. ಕಂದಾಯ ಹಾಗೂ ಶಿಕ್ಷಣ ಇಲಾಖೆಗಳು ಈ ಪ್ರಕ್ರಿಯೆಯನ್ನು ನಿಲ್ಲಿಸಬೇಕು’ ಎಂದು ಒತ್ತಾಯಿಸಿದೆ.
ಸ್ವಾತಂತ್ರ್ಯಪೂರ್ವದಲ್ಲಿ ಆರಂಭವಾಗಿದ್ದ ಚಿಕ್ಕಪೇಟೆಯ ಸರ್ಕಾರಿ ಪ್ರೌಢಶಾಲೆಯ ಕಟ್ಟಡವನ್ನು ಜಾಗದ ಸಮೇತ ಮಾರಾಟ ಮಾಡಲು ಕಂದಾಯ ಇಲಾಖೆ ಮುಂದಾಗಿರುವುದು ಆಕ್ಷೇಪಕ್ಕೆ ಕಾರಣವಾಗಿದೆ.
ಕೇಂದ್ರದಿಂದ ಹಿಡಿದು ರಾಜ್ಯದವರೆಗೂ, ಮಾರಾಟವೇ ಬಿಜೆಪಿಯ ಮೂಲ ಸಿದ್ದಾಂತ.
ವಿಧಾನ ಸೌಧವು ವ್ಯಾಪಾರ ಸೌಧವಾಗಿರುವುದು ಹೊಸ ವಿಷಯವೇನಲ್ಲ!
ಸ್ವತಂತ್ರಪೂರ್ವದಲ್ಲೇ ಶುರುವಾಗಿದ್ದ ಚಿಕ್ಕಪೇಟೆಯ ಐತಿಹಾಸಿಕ ಶಾಲೆಯ ಪ್ರದೇಶವನ್ನು ಖಾಸಗಿಯವರಿಗೆ ಮಾರಾಟಕ್ಕೆ ಮುಂದಾಗಿರುವುದು ಖಂಡನೀಯ.