ಹಣಕಾಸು ಸಂಸ್ಥೆಗಳಲ್ಲಿನ ಹೂಡಿಕೆದಾರರಿಗೆ ವಂಚಿಸುವ ವ್ಯಕ್ತಿಗಳ ವಿರುದ್ಧ ವಿವಿಧೆಡೆ ದಾಖಲಾಗುವ ಪ್ರಕರಣಗಳನ್ನು ಒಂದೇ ಕಡೆಗೆ ವರ್ಗಾಯಿಸಿ, ತನಿಖೆ ನಡೆಸುವುದಕ್ಕೆ ಅವಕಾಶ ಕಲ್ಪಿಸುವುದಕ್ಕಾಗಿ ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ. ಮೊದಲು ಪ್ರಕರಣ ದಾಖಲಾದ ಸ್ಥಳಕ್ಕೆ ಇತರ ಪ್ರಕರಣಗಳನ್ನು ವರ್ಗಾಯಿಸಿ, ಒಟ್ಟಾಗಿ ತನಿಖೆ ನಡೆಸಲು ಈ ತಿದ್ದುಪಡಿ ಅವಕಾಶ ಕಲ್ಪಿಸಲಿದೆ.