‘ಮಾಲ್ಗಳು, ಧಾರ್ಮಿಕ ಕೇಂದ್ರಗಳು, ಚಲನಚಿತ್ರ ಮಂದಿರಗಳನ್ನು ಸರ್ಕಾರ ತೆರೆದಿದೆ. ಆದರೆ, ಗ್ರಾಮ ಪಂಚಾಯಿತಿ ಚುನಾವಣೆ ನಡೆಸುವ ವಿಷಯದಲ್ಲಷ್ಟೇ ಕಾರಣ ಹೇಳುತ್ತಿದೆ. ಸಂವಿಧಾನ ನೀಡಿರುವ ಅಧಿಕಾರದ ಪ್ರಕಾರ ಚುನಾವಾಣಾ ಆಯೋಗ ರಾಜ್ಯಪಾಲರಿಗೆ ಮಾಹಿತಿ ಸಲ್ಲಿಸಬೇಕೆ ವಿನಹ ಸರ್ಕಾರಕ್ಕೆ ಅಲ್ಲ’ ಎಂದು ಅರ್ಜಿದಾರರೊಬ್ಬರ ಪರ ವಕೀಲ ರವಿವರ್ಮಕುಮಾರ್ ತಿಳಿಸಿದರು.