ಬೆಂಗಳೂರು: 'ರಾಜ್ಯ ಸರ್ಕಾರ ಜಾತಿ ಜನಗಣತಿಯ ವರದಿ ಬಹಿರಂಗ ಪಡಿಸಬೇಕು. ಸದಾಶಿವ ಆಯೋಗ ವರದಿ ಜಾರಿಯಾಗಬೇಕು. ಆ ಮೂಲಕ, ಎಡಗೈ ಸಮುದಾಯದ ಮೀಸಲಾತಿ ಬೇಡಿಕೆ ಈಡೇರಿಸಬೇಕು' ಎಂದು ಕಾಂಗ್ರೆಸ್ ನಾಯಕ, ಮಾಜಿ ಸಚಿವ ಎಚ್.ಆಂಜನೇಯ ಆಗ್ರಹಿಸಿದರು.
ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು, 'ಕಾಂತರಾಜು ವರದಿ ಹಾಗೂ ಸದಾಶಿವ ಆಯೋಗದ ವರದಿ ಎರಡೂ ಜಾರಿಯಾಗಬೇಕು. ಸದ್ಯಕ್ಕೆ ದಲಿತ ಸಮುದಾಯದ ಯಾವುದೆ ಸಮಾವೇಶ ಇಲ್ಲ . ಆ ಶಕ್ತಿ ನಮಗಿಲ್ಲ' ಎಂದರು.
'ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮೇಲ್ಜಾತಿಯವರಿಗೂ ಶೇ 10 ಮೀಸಲಾತಿ ಘೋಷಣೆ ಮಾಡಿದರು. ಯಾರು ಬಡವರಿದಾರೆ ಅವರಿಗೆ ಅನುಕೂಲ ಸಿಗಲಿ' ಎಂದೂ ಆಂಜನೇಯ ಹೇಳಿದರು.