ಮೈಸೂರು: ‘ಒಂದು ಎಕರೆಗೆ ₹ 1 ಕೋಟಿ ಬೆಲೆಬಾಳುವ 3,667 ಎಕರೆ ಭೂಮಿಯನ್ನು ₹ 1.12 ಲಕ್ಷದಂತೆ ಜಿಂದಾಲ್ಗೆ ಮಾರಾಟ ಮಾಡಲು, ಗುರುವಾರ (ಮೇ 27) ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಕೊಡಬಾರದು’ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್, ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿಆಗ್ರಹಿಸಿದರು.