<p><strong>ಬೆಂಗಳೂರು:</strong> ‘ಶಾಲಾ ಪಠ್ಯಪುಸ್ತಕ ಪರಿಷ್ಕರಣೆಗೆ ಸಂಬಂಧಿಸಿದಂತೆ ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಸಮಿತಿ ರದ್ದುಗೊಳಿಸಿ, ವರದಿಯನ್ನು ತಿರಸ್ಕರಿಸಬೇಕು’ ಎಂದು ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಆಗ್ರಹಿಸಿದರು.</p>.<p>ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರಾಥಮಿಕ ಶಿಕ್ಷಣ ಪ್ರಜಾಪ್ರಭುತ್ವೀಕರಣ ಆಗಿರಬೇಕು. ಕೇಸರೀಕರಣ ಆಗಬಾರದು. ಮಕ್ಕಳ ವಿಚಾರದಲ್ಲಿ ಮನಸ್ಸಿಗೆ ಬಂದ ಹಾಗೆ ಮಾಡಲು ಬರುವುದಿಲ್ಲ. ಜಾತಿ, ಪಕ್ಷ, ಧರ್ಮದ ಆಧಾರದಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ಮಾಡಬಾರದು’ ಎಂದು ಹೇಳಿದರು.</p>.<p>‘ದೇವರು, ಧರ್ಮ, ಪೂಜೆ, ಯಜ್ಞದ ಬಗ್ಗೆ ತಂದೆ-ತಾಯಿ ಮನೆಯಲ್ಲಿ ಹೇಳಿಕೊಡಬೇಕು. ಸರ್ಕಾರ ಈ ಕೆಲಸ ಮಾಡಬಾರದು. ಪಠ್ಯಪುಸ್ತಕದ ಮೂಲಕ ಮಕ್ಕಳ ಮನಸ್ಸನ್ನು ಎಲ್ಲಿಯೋ ತೆಗೆದುಕೊಂಡು ಹೋಗಲಾಗುತ್ತಿದೆ. ಹೀಗೆ ಮಾಡಿದರೆ ಪಕ್ಷದ ಪ್ರಣಾಳಿಕೆಯನ್ನೂ ಪಠ್ಯಪುಸ್ತಕ ಮಾಡಬಹುದು’ ಎಂದು ವ್ಯಂಗ್ಯವಾಡಿದರು.</p>.<p><a href="https://www.prajavani.net/karnataka-news/karnataka-textbook-row-bjp-slams-congress-and-siddaramaiag-for-kuvempu-issue-politics-939288.html" itemprop="url">ಕುವೆಂಪು ಅವಮಾನಿಸಿ ನಮ್ಮ ತಲೆಗೆ ಕಟ್ಟಲು ಹೊರಟ ಕಾಂಗ್ರೆಸ್ ನಾಟಕ ಬಯಲು: ಬಿಜೆಪಿ </a></p>.<p>‘ಹಾಲಿ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯಲ್ಲಿವಿಷಯ ತಜ್ಞರಿಲ್ಲ. ಶಿಕ್ಷಕರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ.ಹೀಗಾಗಿ, ಎಲ್ಲ ಧರ್ಮ, ವರ್ಗಗಳನ್ನು ಪ್ರತಿನಿಧಿಸುವ ತಜ್ಞರನ್ನು ಒಳಗೊಂಡ ಸಮಿತಿಯನ್ನು ಹೊಸದಾಗಿ ರಚಿಸಬೇಕು.ಟಿಪ್ಪು ಸುಲ್ತಾನ್, ನಾರಾಯಣಗುರು ಅವರನ್ನು ಲಘುವಾಗಿ ಪರಿಗಣಸಬಾರದು. ಈ ನೆಲದ ಬಗ್ಗೆ ಮಕ್ಕಳಿಗೆ ತಿಳಿಸುವ ಕೆಲಸವಾಗಬೇಕು. ಶಾಲೆಗಳಲ್ಲಿ ವಿದ್ಯಾರ್ಥಿಗಳು ಜ್ಞಾನಪೀಠ ಪ್ರಶಸ್ತಿ ಪಡೆದವರನ್ನು ಓದಬೇಕೇ, ಸೂಲಿಬೆಲೆ ಅವರನ್ನು ಓದಬೇಕೆ’ ಎಂದು ಪ್ರಶ್ನಿಸಿದರು.</p>.<p>‘ಪುಸ್ತಕ ಪರಿಷ್ಕರಣೆಯಲ್ಲಿ ಕುವೆಂಪು ಅವರನ್ನು ಗೇಲಿ ಮಾಡಿ ಪರಿಚಯ ಮಾಡಲಾಗಿದೆ. ಅದೇ ಬನ್ನಂಜೆ ಗೋವಿಂದಾಚಾರ್ಯಅವರ ಬಗ್ಗೆ ದೀರ್ಘ ಪರಿಚಯವಿದೆ. ರಾಜ್ಯದಲ್ಲಿ 35 ವಿಶ್ವವಿದ್ಯಾಲಗಳಿದ್ದರೂ ಯಾವುದೇ ವಿಶ್ವವಿದ್ಯಾಲಯ ಇದಕ್ಕೆ ಆಕ್ಷೇಪ ವ್ಯಕ್ತಪಡಿಸದಿರುವುದು ವಿಪರ್ಯಾಸ. ಕೆಲವು ಸಾಹಿತಿಗಳು, ಚಿಂತಕರು, ವಿಮರ್ಶಕರು ಈ ಬಗ್ಗೆ ಸುಮ್ಮನಿದ್ದಾರೆ. ಮಠಾಧಿಪತಿಗಳು ಮಾತನಾಡುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಶಾಲಾ ಪಠ್ಯಪುಸ್ತಕ ಪರಿಷ್ಕರಣೆಗೆ ಸಂಬಂಧಿಸಿದಂತೆ ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಸಮಿತಿ ರದ್ದುಗೊಳಿಸಿ, ವರದಿಯನ್ನು ತಿರಸ್ಕರಿಸಬೇಕು’ ಎಂದು ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಆಗ್ರಹಿಸಿದರು.</p>.<p>ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರಾಥಮಿಕ ಶಿಕ್ಷಣ ಪ್ರಜಾಪ್ರಭುತ್ವೀಕರಣ ಆಗಿರಬೇಕು. ಕೇಸರೀಕರಣ ಆಗಬಾರದು. ಮಕ್ಕಳ ವಿಚಾರದಲ್ಲಿ ಮನಸ್ಸಿಗೆ ಬಂದ ಹಾಗೆ ಮಾಡಲು ಬರುವುದಿಲ್ಲ. ಜಾತಿ, ಪಕ್ಷ, ಧರ್ಮದ ಆಧಾರದಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ಮಾಡಬಾರದು’ ಎಂದು ಹೇಳಿದರು.</p>.<p>‘ದೇವರು, ಧರ್ಮ, ಪೂಜೆ, ಯಜ್ಞದ ಬಗ್ಗೆ ತಂದೆ-ತಾಯಿ ಮನೆಯಲ್ಲಿ ಹೇಳಿಕೊಡಬೇಕು. ಸರ್ಕಾರ ಈ ಕೆಲಸ ಮಾಡಬಾರದು. ಪಠ್ಯಪುಸ್ತಕದ ಮೂಲಕ ಮಕ್ಕಳ ಮನಸ್ಸನ್ನು ಎಲ್ಲಿಯೋ ತೆಗೆದುಕೊಂಡು ಹೋಗಲಾಗುತ್ತಿದೆ. ಹೀಗೆ ಮಾಡಿದರೆ ಪಕ್ಷದ ಪ್ರಣಾಳಿಕೆಯನ್ನೂ ಪಠ್ಯಪುಸ್ತಕ ಮಾಡಬಹುದು’ ಎಂದು ವ್ಯಂಗ್ಯವಾಡಿದರು.</p>.<p><a href="https://www.prajavani.net/karnataka-news/karnataka-textbook-row-bjp-slams-congress-and-siddaramaiag-for-kuvempu-issue-politics-939288.html" itemprop="url">ಕುವೆಂಪು ಅವಮಾನಿಸಿ ನಮ್ಮ ತಲೆಗೆ ಕಟ್ಟಲು ಹೊರಟ ಕಾಂಗ್ರೆಸ್ ನಾಟಕ ಬಯಲು: ಬಿಜೆಪಿ </a></p>.<p>‘ಹಾಲಿ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯಲ್ಲಿವಿಷಯ ತಜ್ಞರಿಲ್ಲ. ಶಿಕ್ಷಕರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ.ಹೀಗಾಗಿ, ಎಲ್ಲ ಧರ್ಮ, ವರ್ಗಗಳನ್ನು ಪ್ರತಿನಿಧಿಸುವ ತಜ್ಞರನ್ನು ಒಳಗೊಂಡ ಸಮಿತಿಯನ್ನು ಹೊಸದಾಗಿ ರಚಿಸಬೇಕು.ಟಿಪ್ಪು ಸುಲ್ತಾನ್, ನಾರಾಯಣಗುರು ಅವರನ್ನು ಲಘುವಾಗಿ ಪರಿಗಣಸಬಾರದು. ಈ ನೆಲದ ಬಗ್ಗೆ ಮಕ್ಕಳಿಗೆ ತಿಳಿಸುವ ಕೆಲಸವಾಗಬೇಕು. ಶಾಲೆಗಳಲ್ಲಿ ವಿದ್ಯಾರ್ಥಿಗಳು ಜ್ಞಾನಪೀಠ ಪ್ರಶಸ್ತಿ ಪಡೆದವರನ್ನು ಓದಬೇಕೇ, ಸೂಲಿಬೆಲೆ ಅವರನ್ನು ಓದಬೇಕೆ’ ಎಂದು ಪ್ರಶ್ನಿಸಿದರು.</p>.<p>‘ಪುಸ್ತಕ ಪರಿಷ್ಕರಣೆಯಲ್ಲಿ ಕುವೆಂಪು ಅವರನ್ನು ಗೇಲಿ ಮಾಡಿ ಪರಿಚಯ ಮಾಡಲಾಗಿದೆ. ಅದೇ ಬನ್ನಂಜೆ ಗೋವಿಂದಾಚಾರ್ಯಅವರ ಬಗ್ಗೆ ದೀರ್ಘ ಪರಿಚಯವಿದೆ. ರಾಜ್ಯದಲ್ಲಿ 35 ವಿಶ್ವವಿದ್ಯಾಲಗಳಿದ್ದರೂ ಯಾವುದೇ ವಿಶ್ವವಿದ್ಯಾಲಯ ಇದಕ್ಕೆ ಆಕ್ಷೇಪ ವ್ಯಕ್ತಪಡಿಸದಿರುವುದು ವಿಪರ್ಯಾಸ. ಕೆಲವು ಸಾಹಿತಿಗಳು, ಚಿಂತಕರು, ವಿಮರ್ಶಕರು ಈ ಬಗ್ಗೆ ಸುಮ್ಮನಿದ್ದಾರೆ. ಮಠಾಧಿಪತಿಗಳು ಮಾತನಾಡುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>