<p><strong>ಕೆಂಭಾವಿ (ಯಾದಗಿರಿ ಜಿಲ್ಲೆ):</strong> ಹಿಜಾಬ್ ವಿವಾದ ಕುರಿತು ಹೈಕೋರ್ಟ್ ಮಂಗಳವಾರ ನೀಡಿದ ಮಹತ್ವದ ತೀರ್ಪಿನ ಬಳಿಕವೂ ಸುರಪುರ ತಾಲ್ಲೂಕಿನ ಕೆಂಭಾವಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎಂಟು ವಿದ್ಯಾರ್ಥಿನಿಯರು ಪೂರ್ವ ಸಿದ್ಧತಾ ಪರೀಕ್ಷೆ ಬರೆಯದೇ ಮನೆಗೆ ಮರಳಿದರು.</p>.<p>ಎರಡು ದಿನಗಳಿಂದ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಪೂರ್ವ ಸಿದ್ಧತಾಪರೀಕ್ಷೆ ನಡೆಯುತ್ತಿದ್ದು, ಮಂಗಳವಾರ ಇಂಗ್ಲಿಷ್ ವಿಷಯದ ಪರೀಕ್ಷೆ ಇತ್ತು. ಒಟ್ಟು 29 ವಿದ್ಯಾರ್ಥಿನಿಯರಲ್ಲಿ ಕಾಲೇಜಿಗೆ ಬಂದ 12 ವಿದ್ಯಾರ್ಥಿನಿಯರ ಪೈಕಿ ನಾಲ್ವರು ಹಿಜಾಬ್ ತೆಗೆದು ಪರೀಕ್ಷೆ ಬರೆದರು.</p>.<p><strong>ಆದೇಶ ಪಾಲಿಸಲ್ಲ:</strong>‘ಹಿಜಾಬ್ ಧರಿಸಿಯೇ ಪೂರ್ವ ಸಿದ್ಧತಾ ಪರೀಕ್ಷೆ ಬರೆಯುತ್ತೇವೆ. ಹಿಜಾಬ್ ತೆಗೆದು ಪರೀಕ್ಷೆ ಬರೆಯಲು ನಮಗೆ ಒಪ್ಪಿಗೆ ಇಲ್ಲ. ಹೈಕೋರ್ಟ್ ಆದೇಶ ಬಂದರೂ ಹಿಜಾಬ್ ಧರಿಸುತ್ತೇವೆ’ ಎಂದು ಯಾದಗಿರಿ ಪದವಿಪೂರ್ವ ಪ್ರಥಮ ವರ್ಷದ ವಿದ್ಯಾರ್ಥಿನಿ ಆಸ್ರಾ ಹೇಳಿದರು.</p>.<p><strong>‘ಹಿಜಾಬ್ಗೆ ಅನುಮತಿ ನೀಡಿದರಷ್ಟೆ ತರಗತಿಗೆ ಹಾಜರು’</strong><br /><strong>ಹಾಸನ:</strong> ಹಿಜಾಬ್ ಕುರಿತು ಹೈಕೋರ್ಟ್ ನೀಡಿರುವ ತೀರ್ಪಿಗೆ ಅಸಮಾಧಾನವ್ಯಕ್ತಪಡಿಸಿರುವ ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜುವಿದ್ಯಾರ್ಥಿಗಳು, ‘ಹಿಜಾಬ್ ಧರಿಸಲು ಅನುಮತಿ ನೀಡುವವರೆಗೂ ತರಗತಿಗೆ ಹಾಜರಾಗುವುದಿಲ್ಲ. ಅನುಮತಿ ನೀಡದಿದ್ದರೆ ಪರೀಕ್ಷೆಗೂ ಹಾಜರಾಗುವುದಿಲ್ಲ’ ಎಂದು ಹೇಳಿದ್ದಾರೆ.</p>.<p>‘ನಾಲ್ಕು ವರ್ಷಗಳಿಂದ ಹಿಜಾಬ್ ಧರಿಸಿಯೇ ಕಾಲೇಜಿಗೆ ಹೋಗುತ್ತಿದ್ದೇವೆ.ಆದರೆ ಈಗೇಕೆ ವಿರೋಧ ವ್ಯಕ್ತವಾಯಿತು? ಈಗಾಗಲೇ ತರಗತಿಗಳಿಲ್ಲದೆ ಸರಿಯಾಗಿ ಓದಲು ಆಗಿಲ್ಲ. ಪರೀಕ್ಷೆಸಮೀಪಿಸುತ್ತಿದ್ದು ತೊಂದರೆಯಾಗಿದೆ. ಕೋರ್ಟ್ ತೀರ್ಪು ಸಮಾಧಾನ ತಂದಿಲ್ಲ. ಶಿಕ್ಷಣದ ಜತೆಗೆ ಹಿಜಾಬ್ ಬೇಕು’ಎಂದು ಪಟ್ಟು ಹಿಡಿದರು.</p>.<p>‘ಒಂದು ತಿಂಗಳಿನಿಂದ ತರಗತಿ ಬಹಿಷ್ಕರಿಸಿದ್ದೇವೆ. ಈ ಆದೇಶದಿಂದ ಪೋಷಕರು ಕಾಲೇಜಿಗೆ ಹೋಗುವುದೇ ಬೇಡ ಎಂದಿದ್ದಾರೆ. ಅವರ ಮಾತು ಮೀರುವುದಿಲ್ಲ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೆಂಭಾವಿ (ಯಾದಗಿರಿ ಜಿಲ್ಲೆ):</strong> ಹಿಜಾಬ್ ವಿವಾದ ಕುರಿತು ಹೈಕೋರ್ಟ್ ಮಂಗಳವಾರ ನೀಡಿದ ಮಹತ್ವದ ತೀರ್ಪಿನ ಬಳಿಕವೂ ಸುರಪುರ ತಾಲ್ಲೂಕಿನ ಕೆಂಭಾವಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎಂಟು ವಿದ್ಯಾರ್ಥಿನಿಯರು ಪೂರ್ವ ಸಿದ್ಧತಾ ಪರೀಕ್ಷೆ ಬರೆಯದೇ ಮನೆಗೆ ಮರಳಿದರು.</p>.<p>ಎರಡು ದಿನಗಳಿಂದ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಪೂರ್ವ ಸಿದ್ಧತಾಪರೀಕ್ಷೆ ನಡೆಯುತ್ತಿದ್ದು, ಮಂಗಳವಾರ ಇಂಗ್ಲಿಷ್ ವಿಷಯದ ಪರೀಕ್ಷೆ ಇತ್ತು. ಒಟ್ಟು 29 ವಿದ್ಯಾರ್ಥಿನಿಯರಲ್ಲಿ ಕಾಲೇಜಿಗೆ ಬಂದ 12 ವಿದ್ಯಾರ್ಥಿನಿಯರ ಪೈಕಿ ನಾಲ್ವರು ಹಿಜಾಬ್ ತೆಗೆದು ಪರೀಕ್ಷೆ ಬರೆದರು.</p>.<p><strong>ಆದೇಶ ಪಾಲಿಸಲ್ಲ:</strong>‘ಹಿಜಾಬ್ ಧರಿಸಿಯೇ ಪೂರ್ವ ಸಿದ್ಧತಾ ಪರೀಕ್ಷೆ ಬರೆಯುತ್ತೇವೆ. ಹಿಜಾಬ್ ತೆಗೆದು ಪರೀಕ್ಷೆ ಬರೆಯಲು ನಮಗೆ ಒಪ್ಪಿಗೆ ಇಲ್ಲ. ಹೈಕೋರ್ಟ್ ಆದೇಶ ಬಂದರೂ ಹಿಜಾಬ್ ಧರಿಸುತ್ತೇವೆ’ ಎಂದು ಯಾದಗಿರಿ ಪದವಿಪೂರ್ವ ಪ್ರಥಮ ವರ್ಷದ ವಿದ್ಯಾರ್ಥಿನಿ ಆಸ್ರಾ ಹೇಳಿದರು.</p>.<p><strong>‘ಹಿಜಾಬ್ಗೆ ಅನುಮತಿ ನೀಡಿದರಷ್ಟೆ ತರಗತಿಗೆ ಹಾಜರು’</strong><br /><strong>ಹಾಸನ:</strong> ಹಿಜಾಬ್ ಕುರಿತು ಹೈಕೋರ್ಟ್ ನೀಡಿರುವ ತೀರ್ಪಿಗೆ ಅಸಮಾಧಾನವ್ಯಕ್ತಪಡಿಸಿರುವ ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜುವಿದ್ಯಾರ್ಥಿಗಳು, ‘ಹಿಜಾಬ್ ಧರಿಸಲು ಅನುಮತಿ ನೀಡುವವರೆಗೂ ತರಗತಿಗೆ ಹಾಜರಾಗುವುದಿಲ್ಲ. ಅನುಮತಿ ನೀಡದಿದ್ದರೆ ಪರೀಕ್ಷೆಗೂ ಹಾಜರಾಗುವುದಿಲ್ಲ’ ಎಂದು ಹೇಳಿದ್ದಾರೆ.</p>.<p>‘ನಾಲ್ಕು ವರ್ಷಗಳಿಂದ ಹಿಜಾಬ್ ಧರಿಸಿಯೇ ಕಾಲೇಜಿಗೆ ಹೋಗುತ್ತಿದ್ದೇವೆ.ಆದರೆ ಈಗೇಕೆ ವಿರೋಧ ವ್ಯಕ್ತವಾಯಿತು? ಈಗಾಗಲೇ ತರಗತಿಗಳಿಲ್ಲದೆ ಸರಿಯಾಗಿ ಓದಲು ಆಗಿಲ್ಲ. ಪರೀಕ್ಷೆಸಮೀಪಿಸುತ್ತಿದ್ದು ತೊಂದರೆಯಾಗಿದೆ. ಕೋರ್ಟ್ ತೀರ್ಪು ಸಮಾಧಾನ ತಂದಿಲ್ಲ. ಶಿಕ್ಷಣದ ಜತೆಗೆ ಹಿಜಾಬ್ ಬೇಕು’ಎಂದು ಪಟ್ಟು ಹಿಡಿದರು.</p>.<p>‘ಒಂದು ತಿಂಗಳಿನಿಂದ ತರಗತಿ ಬಹಿಷ್ಕರಿಸಿದ್ದೇವೆ. ಈ ಆದೇಶದಿಂದ ಪೋಷಕರು ಕಾಲೇಜಿಗೆ ಹೋಗುವುದೇ ಬೇಡ ಎಂದಿದ್ದಾರೆ. ಅವರ ಮಾತು ಮೀರುವುದಿಲ್ಲ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>