ಶ್ರೀಲಂಕಾದ ಏಜೆಂಟರು ಕೆನಡಾದಲ್ಲಿ ಉದ್ಯೋಗದ ಒದಗಿಸುವುದಾಗಿ ಹೇಳಿ ₹6 ರಿಂದ 10 ಲಕ್ಷ ಪಡೆದಿದ್ದು, ಈ ವ್ಯಕ್ತಿಗಳನ್ನು ಖಾಸಗಿ ಬೋಟ್ ಮೂಲಕ ಮಾರ್ಚ್ 17ರಂದು ತಮಿಳುನಾಡಿನ ತೂತುಕುಡಿಗೆ ಕರೆತರಲಾಗಿತ್ತು. ಅಲ್ಲಿ ಚುನಾವಣೆಯ ಹಿನ್ನೆಲೆಯಲ್ಲಿ ಬಿಗಿ ತಪಾಸಣೆ ಆರಂಭವಾಗಿದ್ದರಿಂದ ಇವರನ್ನು ಬಸ್ನಲ್ಲಿ ಬೆಂಗಳೂರಿಗೆ ಕಳುಹಿಸಿ, ಅಲ್ಲಿಂದ ಮಂಗಳೂರಿಗೆ ಸಾಗಿಸಲಾಗಿತ್ತು.