‘ಹಲವು ವರ್ಷಗಳಿಂದ ಏಜೆನ್ಸಿ ನಡೆಸುತ್ತಿರುವ ದೂರುವಾರ, ರೆಮ್ಡಿಸಿವಿರ್ ಚುಚ್ಚುಮದ್ದು ಸರಬರಾಜು ಮಾಡುವವರಿಗಾಗಿ ಹುಡುಕಾಟ ನಡೆಸುತ್ತಿದ್ದರು. ಸೂರತ್ನ ಆದಿನಾಥ್ ಏಜೆನ್ಸಿಯ ವೋರಾ ಎಂಬಾತನ ಮೊಬೈಲ್ ಸಂಖ್ಯೆ ಪಡೆದು ಮಾತನಾಡಿದ್ದರು. ಸರಬರಾಜು ಮಾಡಲು ಒಪ್ಪಿದ್ದ ಆರೋಪಿ, ₹5 ಲಕ್ಷ ಪಡೆದು ನಂತರ ಚುಚ್ಚುಮದ್ದು ಕಳುಹಿಸಿಲ್ಲ’ ಎಂದೂ ಪೊಲೀಸ್ ಮೂಲಗಳು ಹೇಳಿವೆ.