ಕ್ಷೇಮಾಭಿವೃದ್ಧಿ ನಿಧಿ ಸಂಗ್ರಹದಲ್ಲಿದ್ದ ₹ 150 ಕೋಟಿಯಲ್ಲಿ ತೆರಿಗೆ ಹಣವನ್ನು ಆದಾಯ ತೆರಿಗೆ ಇಲಾಖೆ ಪಡೆದುಕೊಂಡಿತ್ತು. ಈ ಹಣ ವಿದ್ಯಾರ್ಥಿ ಹಾಗೂ ಶಿಕ್ಷಕರಿಂದಲೇ ಸಂಗ್ರಹಿಸಿದ್ದ ಹಣವಾದ ಕಾರಣ, ಅದು ಆದಾಯದ ವ್ಯಾಪ್ತಿಗೆ ಬರುವುದಿಲ್ಲ ಎಂದು ಶಿಕ್ಷಣ ಇಲಾಖೆ ಕೋರ್ಟ್ ಮೆಟ್ಟಿಲೇರಿತ್ತು. ಕೋರ್ಟ್ ಬಡ್ಡಿ ಸೇರಿಸಿ, ₹ 18.50 ಕೋಟಿ ಮರಳಿಸಲು ಆದೇಶ ನೀಡಿತ್ತು.