ಸುದ್ದಿಗೋಷ್ಠಿಯಲ್ಲಿ ಗುರುವಾರಈ ಬಗ್ಗೆ ಮಾಹಿತಿ ನೀಡಿದ ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ಮುಖ್ಯಸ್ಥ ಆರ್.ಧರ್ಮಸೇನ, ‘ರಾಜೀವ್ ಗಾಂಧಿ ಗ್ರಾಮೀಣಾಭಿವೃದ್ಧಿ ವಿಭಾಗ, ಕಿಸಾನ್ ವಿಭಾಗ, ಅಸಂಘಟಿತ ಕಾರ್ಮಿಕ, ಕಾರ್ಮಿಕ, ಅಲ್ಪಸಂಖ್ಯಾತ, ಹಿಂದುಳಿದ, ಪರಿಶಿಷ್ಟ ಜಾತಿ ಹಾಗೂ ಪಂಗಡದ ವಿಭಾಗಗಳಿಗೆ ಕಾರ್ಯಕ್ರಮ ಜವಾಬ್ದಾರಿಯನ್ನು ಎಐಸಿಸಿ ನೀಡಿದೆ. ಈ ಎಲ್ಲ ಸಮುದಾಯದ ಜನರಿಗೆ ಸಂವಿಧಾನ ರಕ್ಷಣೆ ನೀಡಿದೆ. ಹೀಗಾಗಿ, ಅದರ ರಕ್ಷಣೆಗಾಗಿ ಹೋರಾಟ ಹಮ್ಮಿಕೊಂಡಿದ್ದೇವೆ’ ಎಂದರು.