<p><strong>ಬೆಂಗಳೂರು</strong>: ‘ಜಾಗತಿಕ ಮಟ್ಟದಲ್ಲಿ ಭಾರತ ನಗೆಪಾಟಲಿಗೀಡಾಗಿಲ್ಲ. ಕ್ವಾಡ್ ದೇಶಗಳು, ಜಿ-7 ರಾಷ್ಟ್ರಗಳ ವೇದಿಕೆ, ಜಾಗತಿಕ ವಾತಾವರಣ ಕುರಿತ ಚರ್ಚೆ ಮುಂತಾದ ವೇದಿಕೆಗಳಲ್ಲಿ ಭಾರತಕ್ಕೆ ದೊರೆತ ಗೌರವಗಳೇ ಇದಕ್ಕೆ ಸಾಕ್ಷಿ’ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಸಮರ್ಥಿಸಿಕೊಂಡಿದ್ದಾರೆ.</p>.<p>‘ಜಾಗತಿಕ ನಾಯಕರು ಭಾರತದ ಬಗ್ಗೆ ಇರಿಸಿರುವ ನಿರೀಕ್ಷೆಗಳೇ ಭಾರತದ ವಿದೇಶಾಂಗ ನೀತಿಯ ಯಶಸ್ಸನ್ನು ತೋರಿಸುತ್ತವೆ. ಹಲವು ದೇಶಗಳು ಕೋವಿಡ್-19 ಕಾರಣದಿಂದ ತೀವ್ರ ಬಿಕ್ಕಟ್ಟು ಎದುರಿಸುತ್ತಿವೆ. ಆದರೆ, ಸವಾಲಿನ ನಡುವೆಯೇ ಭಾರತವು ತನ್ನದೇ ಆದ ರೀತಿಯಲ್ಲಿ ಸಮರ್ಥವಾಗಿ ನಿಭಾಯಿಸಿ, ಆರ್ಥಿಕತೆ ಕುಸಿತವನ್ನು ತಡೆಗಟ್ಟಿದೆ’ ಎಂದು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.</p>.<p>‘ರಾಜಕೀಯ ಆರೋಪ- ಚರ್ಚೆಗಳು ಏನೇ ಇದ್ದರೂ ವ್ಯಾಖ್ಯಾನಗಳ ಅಂತಿಮ ಪರೀಕ್ಷೆಯಾಗುವುದು ಜನತಾ ನ್ಯಾಯಾಲಯದಲ್ಲಿ. ದೇಶದ ಆರ್ಥಿಕತೆಯನ್ನು ಉತ್ತಮವಾಗಿ ನಿಭಾಯಿಸಲಾಗಿದೆ. ಇದಕ್ಕಾಗಿಯೇ ಎರಡು ಚುನಾವಣೆಗಳಲ್ಲಿ ಜನರು ಬೆಂಬಲಿಸಿದ್ದಾರೆ’ ಎಂದು ಜೈಶಂಕರ್ ಹೇಳಿದರು.</p>.<p>‘ಬೆಂಗಳೂರಿನ ಮೂಲಸೌಕರ್ಯ ಸಮಸ್ಯೆಗಳ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ‘ಬೆಂಗಳೂರು ಜಾಗತಿಕ ಬ್ರ್ಯಾಂಡ್ ಆಗುತ್ತಿದೆ. ಮೂಲಸೌಕರ್ಯಗಳ ಸುಧಾರಣೆ ಎಂಬುದು ಮುಗಿಯದ ವಿದ್ಯಮಾನ’ ಎಂದರು.</p>.<p>‘ಹಲವಾರು ವಿದೇಶಿ ಕಂಪನಿಗಳು ಭಾರತಕ್ಕೆ ಬರಲು ಉತ್ಸುಕತೆ ತೋರುತ್ತಿವೆ. ಇದು ಭಾರತದ ಮೇಲಿಟ್ಟಿರುವ ವಿಶ್ವಾಸಕ್ಕೆ ಸಾಕ್ಷಿ. ಇದರ ಲಾಭ ಬೆಂಗಳೂರಿಗೂ ಆಗಲಿದೆ’ ಎಂದು ಹೇಳಿದರು.</p>.<p>‘ಮುಂದಿನ ತಿಂಗಳು ಅಮೆರಿಕ ಭೇಟಿ ಸಂದರ್ಭ ಬೆಂಗಳೂರಿನಲ್ಲಿ ಅಮೆರಿಕ ಕಾನ್ಸಲೇಟ್ ತೆರೆಯುವ ಕುರಿತು ಪ್ರಸ್ತಾಪಿಸಲಾಗುವುದು. ಕಾನ್ಸಲೇಟ್ ತೆರೆಯುವ ಬಗ್ಗೆ ಬೆಂಗಳೂರು ಹಾಗೂ ಹೈದರಾಬಾದ್ ನಡುವಿನ ಸ್ಫರ್ಧೆಯಲ್ಲಿ ಅಮೆರಿಕ 2006ರಲ್ಲಿ ಎರಡನೆಯದನ್ನೇ ಆಯ್ಕೆ ಮಾಡಿಕೊಂಡಿತ್ತು. ಅದು ಆ ದೇಶದ ನಿರ್ಧಾರ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ಜಾಗತಿಕ ಮಟ್ಟದಲ್ಲಿ ಭಾರತ ನಗೆಪಾಟಲಿಗೀಡಾಗಿಲ್ಲ. ಕ್ವಾಡ್ ದೇಶಗಳು, ಜಿ-7 ರಾಷ್ಟ್ರಗಳ ವೇದಿಕೆ, ಜಾಗತಿಕ ವಾತಾವರಣ ಕುರಿತ ಚರ್ಚೆ ಮುಂತಾದ ವೇದಿಕೆಗಳಲ್ಲಿ ಭಾರತಕ್ಕೆ ದೊರೆತ ಗೌರವಗಳೇ ಇದಕ್ಕೆ ಸಾಕ್ಷಿ’ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಸಮರ್ಥಿಸಿಕೊಂಡಿದ್ದಾರೆ.</p>.<p>‘ಜಾಗತಿಕ ನಾಯಕರು ಭಾರತದ ಬಗ್ಗೆ ಇರಿಸಿರುವ ನಿರೀಕ್ಷೆಗಳೇ ಭಾರತದ ವಿದೇಶಾಂಗ ನೀತಿಯ ಯಶಸ್ಸನ್ನು ತೋರಿಸುತ್ತವೆ. ಹಲವು ದೇಶಗಳು ಕೋವಿಡ್-19 ಕಾರಣದಿಂದ ತೀವ್ರ ಬಿಕ್ಕಟ್ಟು ಎದುರಿಸುತ್ತಿವೆ. ಆದರೆ, ಸವಾಲಿನ ನಡುವೆಯೇ ಭಾರತವು ತನ್ನದೇ ಆದ ರೀತಿಯಲ್ಲಿ ಸಮರ್ಥವಾಗಿ ನಿಭಾಯಿಸಿ, ಆರ್ಥಿಕತೆ ಕುಸಿತವನ್ನು ತಡೆಗಟ್ಟಿದೆ’ ಎಂದು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.</p>.<p>‘ರಾಜಕೀಯ ಆರೋಪ- ಚರ್ಚೆಗಳು ಏನೇ ಇದ್ದರೂ ವ್ಯಾಖ್ಯಾನಗಳ ಅಂತಿಮ ಪರೀಕ್ಷೆಯಾಗುವುದು ಜನತಾ ನ್ಯಾಯಾಲಯದಲ್ಲಿ. ದೇಶದ ಆರ್ಥಿಕತೆಯನ್ನು ಉತ್ತಮವಾಗಿ ನಿಭಾಯಿಸಲಾಗಿದೆ. ಇದಕ್ಕಾಗಿಯೇ ಎರಡು ಚುನಾವಣೆಗಳಲ್ಲಿ ಜನರು ಬೆಂಬಲಿಸಿದ್ದಾರೆ’ ಎಂದು ಜೈಶಂಕರ್ ಹೇಳಿದರು.</p>.<p>‘ಬೆಂಗಳೂರಿನ ಮೂಲಸೌಕರ್ಯ ಸಮಸ್ಯೆಗಳ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ‘ಬೆಂಗಳೂರು ಜಾಗತಿಕ ಬ್ರ್ಯಾಂಡ್ ಆಗುತ್ತಿದೆ. ಮೂಲಸೌಕರ್ಯಗಳ ಸುಧಾರಣೆ ಎಂಬುದು ಮುಗಿಯದ ವಿದ್ಯಮಾನ’ ಎಂದರು.</p>.<p>‘ಹಲವಾರು ವಿದೇಶಿ ಕಂಪನಿಗಳು ಭಾರತಕ್ಕೆ ಬರಲು ಉತ್ಸುಕತೆ ತೋರುತ್ತಿವೆ. ಇದು ಭಾರತದ ಮೇಲಿಟ್ಟಿರುವ ವಿಶ್ವಾಸಕ್ಕೆ ಸಾಕ್ಷಿ. ಇದರ ಲಾಭ ಬೆಂಗಳೂರಿಗೂ ಆಗಲಿದೆ’ ಎಂದು ಹೇಳಿದರು.</p>.<p>‘ಮುಂದಿನ ತಿಂಗಳು ಅಮೆರಿಕ ಭೇಟಿ ಸಂದರ್ಭ ಬೆಂಗಳೂರಿನಲ್ಲಿ ಅಮೆರಿಕ ಕಾನ್ಸಲೇಟ್ ತೆರೆಯುವ ಕುರಿತು ಪ್ರಸ್ತಾಪಿಸಲಾಗುವುದು. ಕಾನ್ಸಲೇಟ್ ತೆರೆಯುವ ಬಗ್ಗೆ ಬೆಂಗಳೂರು ಹಾಗೂ ಹೈದರಾಬಾದ್ ನಡುವಿನ ಸ್ಫರ್ಧೆಯಲ್ಲಿ ಅಮೆರಿಕ 2006ರಲ್ಲಿ ಎರಡನೆಯದನ್ನೇ ಆಯ್ಕೆ ಮಾಡಿಕೊಂಡಿತ್ತು. ಅದು ಆ ದೇಶದ ನಿರ್ಧಾರ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>