ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷೆ ಕೆ.ಎಸ್. ವಿಮಲಾ ಅಧ್ಯಕ್ಷತೆ ವಹಿಸಿದ್ದರು. ವಕೀಲೆ ಮೈತ್ರೇಯಿ ಕೃಷ್ಣನ್ ಅವರು ಸಂವಿಧಾನದ 21ನೇ ವಿಧಿ ಕುರಿತು ಉಪನ್ಯಾಸ ನೀಡಿದರು. ಲೇಖಕರಾದ ಡಾ.ಎಚ್. ಜಯಲಕ್ಷ್ಮಿ, ಡಾ.ಎನ್. ಗಾಯತ್ರಿ, ವಿಮೆನ್ಸ್ ವಾಯ್ಸ್ನ ಲೀಲಾವತಿ, ದಲಿತ ಹಕ್ಕುಗಳ ಸಮಿತಿಯ ಕವಿತಾ, ಜನವಾದಿ ಮಹಿಳಾ ಸಂಘಟನೆಯ ಗೌರಮ್ಮ, ಸಮುದಾಯ ಸಂಘಟನೆಯ ಸುರೇಂದ್ರ ರಾವ್, ಎಸ್ಎಫ್ಐನ ಭೀಮನಗೌಡ, ‘ಗಮನಾ’ದ ಮಧುಭೂಷಣ, ಮಮತಾ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.