<p><strong>ಚಿಕ್ಕಬಳ್ಳಾಪುರ</strong>: ‘ಗಣಿ, ಶಿಕ್ಷಣ, ಅಬಕಾರಿ, ಗುತ್ತಿಗೆ ಹಾಗೂ ಭೂ ಮಾಫಿಯಾಗಳನ್ನೆಲ್ಲ ಯಾವ ಮುಲಾಜಿಲ್ಲದೆ ಬಗ್ಗುಬಡಿಯುತ್ತೇವೆ.ನಮ್ಮ ಸರ್ಕಾರ ಯಾರ ಮುಲಾಜಿನಲ್ಲಿಯೂ ಇಲ್ಲ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.</p>.<p>ತಾಲ್ಲೂಕಿನ ಗುಂಗೀರ್ಲಹಳ್ಳಿಯಲ್ಲಿ ಶನಿವಾರ ‘ಕಂದಾಯ ದಾಖಲೆ ಮನೆಬಾಗಿಲಿಗೆ ಯೋಜನೆ’ಗೆ ಚಾಲನೆ ನೀಡಿದರು. ‘ಈ ಹಿಂದಿನ ಸರ್ಕಾರಗಳು ಮಾಫಿಯಾ ಮುಲಾಜಿನಲ್ಲಿ ಇದ್ದ ಕಾರಣ ಅವರನ್ನು ಮುಟ್ಟುತ್ತಿರಲಿಲ್ಲ. ಆದರೆ, ಭಾಷಣ ಮಾತ್ರ ಬಡವರ ಪರವಾಗಿದ್ದವು’ ಎಂದರು.</p>.<p>‘ಈ ಹಿಂದಿನ ಸರ್ಕಾರಗಳು ‘ಗರೀಬಿ ಹಠಾವೋ’ ಎಂದು ಹೇಳಿದವು. ಆದರೆ ಏನನ್ನೂ ಮಾಡಲಿಲ್ಲ. ಪರಿಶಿಷ್ಟರು, ಹಿಂದುಳಿದವರು ಉದ್ಧಾರ ಮಾಡುತ್ತೇವೆ ಎಂದು70 ವರ್ಷಗಳಿಂದ ಹೇಳಿದರು. ಅವರು ಉದ್ಧಾರವಾಗಿದ್ದರೆ ನಾವು ಈ<br />ಕಾರ್ಯ ಮಾಡುವ ಅಗತ್ಯವಿರಲಿಲ್ಲ.ಬಡವರ ಹೆಸರಿನಲ್ಲಿ ಇಷ್ಟು ವರ್ಷ ರಾಜಕಾರಣ ನಡೆದಿದೆ. ‘ನಮ್ಮದು ಜನಸೇವೆ<br />ಗಾಗಿ ರಾಜಕಾರಣ. ಅವರದ್ದು ಅಧಿಕಾರಕ್ಕಾಗಿ ರಾಜಕಾರಣ ಎಂದು ಕಾಂಗ್ರೆಸ್ ಪಕ್ಷದ ಹೆಸರು ಹೇಳದೆ ಟೀಕಿಸಿದರು.</p>.<p>‘ಮಾಸಾಶನ, ಜಮೀನಿನ ನಕ್ಷೆ ಹೀಗೆಕಂದಾಯ ಇಲಾಖೆಯ ದಾಖಲೆಗಳಿಗೆ ಅಲೆದಾಡುವವರು ಬಡವರೇ ಆಗಿರು<br />ತ್ತಾರೆ. ಬಡವರು ಹೀಗೆ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ‘ಕಂದಾಯದಾಖಲೆ ಮನೆಬಾಗಿಲಿಗೆ ಯೋಜನೆ’ ಜಾರಿಗೊಳಿಸಿದ್ದೇವೆ. ಸರ್ಕಾರವನ್ನೇ ಬಡವರ ಮನೆ ಬಾಗಿಲಿಗೆ ಕೊಂಡೊಯ್ಯಲಾಗುವುದು. ಇದೊಂದು ಕಂದಾಯ ಕ್ರಾಂತಿ’ ಎಂದು ಬೊಮ್ಮಾಯಿ ಬಣ್ಣಿಸಿದರು.</p>.<p>‘ರಾಜ್ಯದ ಎಲ್ಲ ಗ್ರಾಮಗಳಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗಿದೆ. 55 ಲಕ್ಷ ರೈತರ ಮನೆಗಳಿಗೆ ತೆರಳಿ ಐದು ಕೋಟಿ ದಾಖಲೆ ನೀಡುತ್ತಿದ್ದೇವೆ. ಈ ಜನಪರ ಕಾರ್ಯಕ್ರಮ ನಿಮ್ಮ ಮನೆಗೆ ಮುಟ್ಟಿದಾಗ ಇಂತಹ ಕಾರ್ಯಕ್ರಮ ಕೊಟ್ಟ ಸರ್ಕಾರಕ್ಕೆ ಒಳ್ಳೆಯದಾಗಲಿ, ಜನ ಬೆಂಬಲ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸಿ’ ಎಂದು ಮನವಿ ಮಾಡಿದರು.</p>.<p>ಸಚಿವರಾದ ಆರ್.ಅಶೋಕ, ಡಾ.ಕೆ.ಸುಧಾಕರ್, ಎಂ.ಟಿ.ಬಿ.ನಾಗರಾಜು ವೇದಿಕೆಯಲ್ಲಿದ್ದರು.</p>.<p><strong>3 ಸಾವಿರ ಭೂ ಮಾಪಕರ ನೇಮಕ</strong></p>.<p>ಡೀಮ್ಡ್ ಅರಣ್ಯ ವ್ಯಾಪ್ತಿಯಲ್ಲಿರುವ ಕಂದಾಯ ಭೂಮಿಯನ್ನು ಇಲಾಖೆ ವಾಪಸ್ ಪಡೆಯುವ ಕೆಲಸ ಆಗುತ್ತಿದೆ. ಜಮೀನು ಸರ್ವೆಗೆ ಸಂಬಂಧಿಸಿ ಎರಡು ಲಕ್ಷ ಅರ್ಜಿ ಬಾಕಿ ಇವೆ. ಅವುಗಳ ವಿಲೇವಾರಿಗೆ 3 ಸಾವಿರ ಭೂ ಮಾಪಕರನ್ನು ನೇಮಿಸಲಾಗುವುದು ಎಂದುಕಂದಾಯ ಸಚಿವ ಆರ್.ಅಶೋಕ ಹೇಳಿದರು.</p>.<p>ಮನೆ ನಿರ್ಮಾಣಕ್ಕೆ ಭೂ ಪರಿವರ್ತನೆ ಮಾಡಲು ಒಂದೆರಡು ತಿಂಗಳಾಗುತ್ತಿದೆ. ಆದರೆ ಮುಂದಿನ ದಿನಗಳಲ್ಲಿ ಕೇವಲ ಎರಡೇದಿನಗಳಲ್ಲಿ ಭೂ ಪರಿವರ್ತನೆ ಮಾಡಿಕೊಡುವ ವ್ಯವಸ್ಥೆ ಜಾರಿಗೊಳಿಸುತ್ತೇವೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಬಳ್ಳಾಪುರ</strong>: ‘ಗಣಿ, ಶಿಕ್ಷಣ, ಅಬಕಾರಿ, ಗುತ್ತಿಗೆ ಹಾಗೂ ಭೂ ಮಾಫಿಯಾಗಳನ್ನೆಲ್ಲ ಯಾವ ಮುಲಾಜಿಲ್ಲದೆ ಬಗ್ಗುಬಡಿಯುತ್ತೇವೆ.ನಮ್ಮ ಸರ್ಕಾರ ಯಾರ ಮುಲಾಜಿನಲ್ಲಿಯೂ ಇಲ್ಲ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.</p>.<p>ತಾಲ್ಲೂಕಿನ ಗುಂಗೀರ್ಲಹಳ್ಳಿಯಲ್ಲಿ ಶನಿವಾರ ‘ಕಂದಾಯ ದಾಖಲೆ ಮನೆಬಾಗಿಲಿಗೆ ಯೋಜನೆ’ಗೆ ಚಾಲನೆ ನೀಡಿದರು. ‘ಈ ಹಿಂದಿನ ಸರ್ಕಾರಗಳು ಮಾಫಿಯಾ ಮುಲಾಜಿನಲ್ಲಿ ಇದ್ದ ಕಾರಣ ಅವರನ್ನು ಮುಟ್ಟುತ್ತಿರಲಿಲ್ಲ. ಆದರೆ, ಭಾಷಣ ಮಾತ್ರ ಬಡವರ ಪರವಾಗಿದ್ದವು’ ಎಂದರು.</p>.<p>‘ಈ ಹಿಂದಿನ ಸರ್ಕಾರಗಳು ‘ಗರೀಬಿ ಹಠಾವೋ’ ಎಂದು ಹೇಳಿದವು. ಆದರೆ ಏನನ್ನೂ ಮಾಡಲಿಲ್ಲ. ಪರಿಶಿಷ್ಟರು, ಹಿಂದುಳಿದವರು ಉದ್ಧಾರ ಮಾಡುತ್ತೇವೆ ಎಂದು70 ವರ್ಷಗಳಿಂದ ಹೇಳಿದರು. ಅವರು ಉದ್ಧಾರವಾಗಿದ್ದರೆ ನಾವು ಈ<br />ಕಾರ್ಯ ಮಾಡುವ ಅಗತ್ಯವಿರಲಿಲ್ಲ.ಬಡವರ ಹೆಸರಿನಲ್ಲಿ ಇಷ್ಟು ವರ್ಷ ರಾಜಕಾರಣ ನಡೆದಿದೆ. ‘ನಮ್ಮದು ಜನಸೇವೆ<br />ಗಾಗಿ ರಾಜಕಾರಣ. ಅವರದ್ದು ಅಧಿಕಾರಕ್ಕಾಗಿ ರಾಜಕಾರಣ ಎಂದು ಕಾಂಗ್ರೆಸ್ ಪಕ್ಷದ ಹೆಸರು ಹೇಳದೆ ಟೀಕಿಸಿದರು.</p>.<p>‘ಮಾಸಾಶನ, ಜಮೀನಿನ ನಕ್ಷೆ ಹೀಗೆಕಂದಾಯ ಇಲಾಖೆಯ ದಾಖಲೆಗಳಿಗೆ ಅಲೆದಾಡುವವರು ಬಡವರೇ ಆಗಿರು<br />ತ್ತಾರೆ. ಬಡವರು ಹೀಗೆ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ‘ಕಂದಾಯದಾಖಲೆ ಮನೆಬಾಗಿಲಿಗೆ ಯೋಜನೆ’ ಜಾರಿಗೊಳಿಸಿದ್ದೇವೆ. ಸರ್ಕಾರವನ್ನೇ ಬಡವರ ಮನೆ ಬಾಗಿಲಿಗೆ ಕೊಂಡೊಯ್ಯಲಾಗುವುದು. ಇದೊಂದು ಕಂದಾಯ ಕ್ರಾಂತಿ’ ಎಂದು ಬೊಮ್ಮಾಯಿ ಬಣ್ಣಿಸಿದರು.</p>.<p>‘ರಾಜ್ಯದ ಎಲ್ಲ ಗ್ರಾಮಗಳಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗಿದೆ. 55 ಲಕ್ಷ ರೈತರ ಮನೆಗಳಿಗೆ ತೆರಳಿ ಐದು ಕೋಟಿ ದಾಖಲೆ ನೀಡುತ್ತಿದ್ದೇವೆ. ಈ ಜನಪರ ಕಾರ್ಯಕ್ರಮ ನಿಮ್ಮ ಮನೆಗೆ ಮುಟ್ಟಿದಾಗ ಇಂತಹ ಕಾರ್ಯಕ್ರಮ ಕೊಟ್ಟ ಸರ್ಕಾರಕ್ಕೆ ಒಳ್ಳೆಯದಾಗಲಿ, ಜನ ಬೆಂಬಲ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸಿ’ ಎಂದು ಮನವಿ ಮಾಡಿದರು.</p>.<p>ಸಚಿವರಾದ ಆರ್.ಅಶೋಕ, ಡಾ.ಕೆ.ಸುಧಾಕರ್, ಎಂ.ಟಿ.ಬಿ.ನಾಗರಾಜು ವೇದಿಕೆಯಲ್ಲಿದ್ದರು.</p>.<p><strong>3 ಸಾವಿರ ಭೂ ಮಾಪಕರ ನೇಮಕ</strong></p>.<p>ಡೀಮ್ಡ್ ಅರಣ್ಯ ವ್ಯಾಪ್ತಿಯಲ್ಲಿರುವ ಕಂದಾಯ ಭೂಮಿಯನ್ನು ಇಲಾಖೆ ವಾಪಸ್ ಪಡೆಯುವ ಕೆಲಸ ಆಗುತ್ತಿದೆ. ಜಮೀನು ಸರ್ವೆಗೆ ಸಂಬಂಧಿಸಿ ಎರಡು ಲಕ್ಷ ಅರ್ಜಿ ಬಾಕಿ ಇವೆ. ಅವುಗಳ ವಿಲೇವಾರಿಗೆ 3 ಸಾವಿರ ಭೂ ಮಾಪಕರನ್ನು ನೇಮಿಸಲಾಗುವುದು ಎಂದುಕಂದಾಯ ಸಚಿವ ಆರ್.ಅಶೋಕ ಹೇಳಿದರು.</p>.<p>ಮನೆ ನಿರ್ಮಾಣಕ್ಕೆ ಭೂ ಪರಿವರ್ತನೆ ಮಾಡಲು ಒಂದೆರಡು ತಿಂಗಳಾಗುತ್ತಿದೆ. ಆದರೆ ಮುಂದಿನ ದಿನಗಳಲ್ಲಿ ಕೇವಲ ಎರಡೇದಿನಗಳಲ್ಲಿ ಭೂ ಪರಿವರ್ತನೆ ಮಾಡಿಕೊಡುವ ವ್ಯವಸ್ಥೆ ಜಾರಿಗೊಳಿಸುತ್ತೇವೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>